ಮದುವೆ ದಿನವೇ ನಾಪತ್ತೆಯಾದ ಮದುಮಗ : ಕಂಗಾಲಾದ ಕುಟುಂಬಸ್ಥರು

ಮದುವೆ ದಿನವೇ ಮದುಮಗ ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

ಸಂಕೇಶ್ವರ ಪಟ್ಟಣದ ಸುನೀಲ ಪಾಟೀಲ ನಾಪತ್ತೆಯಾದ ಮದುಮಗ. ಸಾಯಿ ಕಾರ್ಯಾಲಯದಲ್ಲಿ ಇಂದು ಮಹಾರಾಷ್ಟ್ರ ಮೂಲದ ಯುವತಿಯೊಂದಿಗೆ ೧೨.೩೦ ಕ್ಕೆ ನಿಗಧಿಯಾಗಿದ್ದ ಅಕ್ಷತಾರೋಹಣ ನಡೆಯಬೇಕಿತ್ತು. ಆತನೇ ಇಷ್ಟಪಟ್ಟು 8 ತಿಂಗಳ ಹಿಂದೆಯೇ ನಿಶ್ಚಿತಾರ್ಥವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಮದುಮಗ ಇಲ್ಲದ ಕಾರಣ ಮನೆ ಜನ ಕಂಗಾಲಾಗಿದ್ದಾರೆ.

ನಿನ್ನೆ ಸಂಜೆವರೆಗೂ ಮದುವೇಮನೆಯಲ್ಲಿಯೇ ಇದ್ದ ಸುನೀಲ ಯಾರಿಗೂ ಹೇಳದೆ ಕೇಳದೆ ರಾತ್ರೋರಾತ್ರಿ ನಾಪತ್ತೆಯಗಿದ್ದಾನೆ. ರಾತ್ರಿ ಅರಶಿನ ಕಾರ್ಯಕ್ಕೆ ಸುನೀಲನನ್ನು ಹುಡುಕಿದಾಗ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಮದುಮಗನ ಮೊಬೈಲ್‌ ಕೂಡ ಸ್ವಿಚ್ ಆಪ್ ಮಾಡಲಾಗಿದೆ.

ಸುನೀಲ ಪಾಟೀಲ ಕನ್ನಡ ಪರ ಸಂಘಟನೆಯೊಂದರ ತಾಲೂಕು ಅಧ್ಯಕ್ಷ. ವಧುವಿನ ಕುಟುಂಬಸ್ಥರು ಕಣ್ಣಿರಿಡುತ್ತಾ ಕುಳಿತಿದ್ದಾರೆ. ಸಂಕೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights