ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು : ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ
ವೈದ್ಯರ, ಹಾಗೂ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಯಶೋಧರಾ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಸಂಗಮೇಶ ಗಂಗಶೆಟ್ಟಿ(38) ಮೃತ ವ್ಯಕ್ತಿ. ಜ. 10 ರಂದು ಅಪಘಾತದಲ್ಲಿ ಗಾಯಗೊಂಡಿದ್ದ ಸಂಗಮೇಶ ಗಂಗಶೆಟ್ಟಿ ಅವರನ್ನ ವಿಜಯಪುರ ನಗರದ ಹೊರ ಭಾಗದಲ್ಲಿರುವ ಯಶೋಧರಾ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ಮದ್ಯಾಹ್ನ ಚಿಕಿತ್ಸೆ ಫಲಿಸದೇ ಸಂಗಮೇಶ ಗಂಗಶೆಟ್ಟಿ ಮೃತಪಟ್ಟಿದ್ದು, ಮದ್ಯಾಹ್ನ ಮೃತಪಟ್ಟರೂ ವಿಷಯ ತಿಳಿಸಿಲ್ಲ ಜೊತೆಗೆ ಸಾಯಂಕಾಲ 4 ಗಂಟೆಗೆ ವಿಷಯ ತಿಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ರೂ. 8 ರಿಂದ 10 ಲಕ್ಷ ಖರ್ಚು ಮಾಡಿದ್ದೇವೆಂದು ಮೃತನ ಸಂಬಂಧಿಕರು ಆರೋಪ ಮಾಡಿದ್ದಾರೆ. ಸಂಗಮೇಶ ಗಂಗಶೆಟ್ಟಿ ಮೃತಪಟ್ಟಿದ್ದ ವಿಚಾರ ಮುಚ್ಚಿಟ್ಟಿದ್ದಾರೆ ಎಂದು ಸಂಬಂಧಿಕರ ಆರೋಪ ಮಾಡಿದ್ದಾರೆ.
ವೈದ್ಯರ ಜೊತೆ ಮಾತಿನ ಚಕಮಕಿ, ವಾಗ್ವಾದಕ್ಕಿಳಿದ ಸಂಬಂಧಿಕರು ವೈದ್ಯ ಡಾ. ಸಂಗಮೇಶ ಅವರನ್ನು ಹಿಡಿದು ಎಳೆದಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.