ಅಮಿತ್ ಶಾ ಮೇಲೆ ‘ಟಗರು’ ಟ್ವೀಟ್ ಅಟ್ಯಾಕ್..! : ‘ಶಾ’ ಗೆ ಸಿದ್ದು ಪ್ರಶ್ನೆಗಳ ಸುರಿಮಳೆ
ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿರುವ ಹಿನ್ನಲೆ, ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟಾಸ್ತ್ರ ಬಳಕೆ ಮಾಡಿದ್ದಾರೆ.
ಹೌದು… ಅಮಿತ್ ಶಾ ಮೇಲೆ ‘ ಟಗರು’ ಟ್ವೀಟ್ ಅಟ್ಯಾಕ್ ಮಾಡಿದ್ದು ಶಾ ಗೆ ಸಿದ್ದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಮಂಗಳೂರಿನಲ್ಲಿ ಇಬ್ಬರು ಅಮಾಯಕರ ಮೇಲೆ ಗೋಲಿಬಾರ್ ಆಗಿದೆ. ಈ ಬಗ್ಗೆ ವಿಚಾರಣೆ ಮಾಡಲಿಲ್ಲಾ ಯಾಕೆ..? ಎನ್ನುವ ಮೊದಲ ಪ್ರಶ್ನೆಯನ್ನು ಕೇಳಿದ್ದಾರೆ.
ನಂತರ ಕಳಸಾ ಮಂಡೂರಿ ವಿಚಾರದಲ್ಲಿ ನಿಮ್ಮ ನಿಲುವು ಏನು..? ನಿಮ್ಮ ಪಕ್ಷ ಚುನಾವಣೆ ಮುಂಚೆ ನಮ್ಮ ಪರವಾಗಿ ಮಾತನಾಡಿ ನಂತರ ಗೋವಾ ಪರವಾಗಿ ಮಾತನಾಡುತ್ತಿದೆ.
ಇನ್ನೂ ಪ್ರವಾಹದ ನಷ್ಟಕ್ಕೆ 35 ಸಾವಿರ ಕೋಟಿ ಪರಿಹಾರ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 1,870 ಕೋಟಿ ರೂಪಾಯಿ ಮಾತ್ರ. ಉಳಿದ ಹಣ ಯಾವಾಗ ಕೊಡ್ತೀರಿ..?
ಜನರ ನಡುವೆ ವಿಭಜನೆಯಾಗುವಂತ ಯೋಜನೆ ತಂದಿದ್ದೀರಿ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ ಯಾಕೆ..? ಪರಿಹಾರ ಮರುಪರಿಶೀಲನೆ ಯಾಕೆ ಮಾಡಬಾರದು ಎಂದು ಸರದಿ ಪ್ರಶ್ನೆಗಳನ್ನು ಕೇಳಿದ್ದಾರೆ.