‘ಬಾಲ್ಯದಲ್ಲಿ ಕ್ರಿಕೆಟ್ ತಂಡಕ್ಕೆ ಸೇರಲು 2ರೂ. ಶುಲ್ಕ ಕಟ್ಟಲೂ ಹಣವಿರಲಿಲ್ಲ’

ಕೆಲವೊಂದು ಬಾರಿ ಕೆಲವರ ಮಾತುಗಳು ಅದೆಷ್ಟು ಆಶ್ಚರ್ಯ ಎನಿಸುತ್ತವೆ ಅಂದರೆ ಕೆಲವೊಂದರ ಮಹತ್ವವನ್ನು ಸಾರಿ ಹೇಳುತ್ತವೆ. ಹೌದು ಈಗ ಯಾರ ಮಾತು ಯಾವುದರ ಮಹತ್ವವನ್ನು  ಸಾರಿ ಹೇಳಿತು ಅಂತ ಅನ್ತಿರಬೇಕು ಅಲ್ವಾ..

ಅದು ಮತ್ಯಾರು ಅಲ್ಲ ಬಿಗ್ ಬಿ ಅಮಿತಾಭ್ ಬಚ್ಚನ್ ಹಂಚಿಕೊಂಡ ಮಾತು. ತಮ್ಮ ಬಾಲ್ಯದಲ್ಲಿ ನಡೆದ ಒಂದು ಘಟನೆ ಹಂಚಿಕೊಂಡಾಗ ಆಶ್ಚರ್ಯ ಅನಿಸಿದೆ.

ಹಿಂದಿಯ ಕೌನ್ ಬನೇಗಾ ಕರೋಡ್‌ಪತಿಯ ಹನ್ನೊಂದನೇ ಅವತರಣಿಕೆ ಬರುತ್ತಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅದರ ನಿರೂಪಣೆ ಮುಂದುವರಿಸಿದ್ದಾರೆ.

ಈ ಸಂದರ್ಭದಲ್ಲಿ ಹಲವು ಸ್ವಾರಸ್ಯಕರ ಸಂಗತಿ ಹಂಚಿಕೊಳ್ಳುವ ಅಮಿತಾಭ್ ಮೊನ್ನೆ ತಮ್ಮ ಬಾಲ್ಯದ ವಿಶೇಷ ಸಂಗತಿಯೊಂದನ್ನು ಹಂಚಿಕೊಂಡರು. ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಸ್ಪರ್ಧಿ ಹೇಮಂತ್ ಗೋಯಲ್, ಬೆಳೆಯುವಾಗ ತಮ್ಮ ಮನೆಯಲ್ಲಿದ್ದ ಬಡತನದ ಬಗ್ಗೆ ಹೇಳಿದರು.

ಆಗ ಪ್ರತಿಕ್ರಿಯಿಸಿದ ಅಮಿತಾಭ್ ತಮ್ಮ ಬಾಲ್ಯದಲ್ಲಿ ಶಾಲಾ ಕ್ರಿಕೆಟ್ ತಂಡಕ್ಕೆ ಸೇರಲು 2 ರೂ. ಶುಲ್ಕ ಕಟ್ಟಲೂ ಹಣವಿರಲಿಲ್ಲವೆಂದು ಅವರ ಅನುಭವ ಹಂಚಿಕೊಂಡರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights