ರಸ್ತೆ ಬದಿ ನಿಂತಿದ್ದ ಲಾರಿಗೆ ಪ್ರವಾಸಿಗರಿದ್ದ ಮಿನಿ ಬಸ್ ಡಿಕ್ಕಿ : ಓರ್ವ ಸಾವು!
ರಸ್ತೆ ಬದಿ ನಿಂತಿದ್ದ ಲಾರಿಗೆ ಪ್ರವಾಸಿಗರಿದ್ದ ಮಿನಿ ಬಸದಸೊಂದು ಹಿಂಬಂದಿಯಿಂದ ಡಿಕ್ಕಿ ಹೊಡೆದು ಓರ್ವ ಪ್ರವಾಸಿ ಸಾವಿಗೀಡಾಗಿ, 8 ಮಂದಿಗೆ ಗಾಯಗೊಂಡ ಘಟನೆ ಕೆ.ಆರ್. ಪೇಟೆ ತಾಲ್ಲೂಕಿನ ತೇಗನಹಳ್ಳಿ ಬಳಿ ನಡೆದಿದೆ.
ನ್ಯಾಯಾಂಗ ಇಲಾಖೆ ನಿವೃತ್ತ ನೌಕರ ಮಲ್ಲಿಕಾರ್ಜುನ ಬಸಪ್ಪ ಹಾಂದಿಯಾಳ್(63) ಸಾವಿಗೀಡಾಗಿದ್ದು, ಮೃತ ವ್ಯಕ್ತಿ, ಹಾಗೂ ಗಾಯಾಳುಗಳು ರಾಣಿಬೆನ್ನೂರು ಮೂಲದವರಾಗಿದ್ದಾರೆ.
ಮೈಸೂರು ಪ್ರವಾಸಕ್ಕೆಂದು ತೆರಳುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಟೆಂಪೋ ಡಿಕ್ಕಿ ಹೊಡೆದು ಘಟನೆ ನಡೆದಿದೆ. ಗಾಯಾಳುಗಳಿಗೆ ಕೆ.ಆರ್.ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮಿನಿ ಬಸ್ ಚಾಲಕ ಅಪಘಾತದ ಬಳಿಕ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.