ಹುಣಸೂರು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ನಾಮಪತ್ರ ಸಲ್ಲಿಕೆ : ಕ್ಷೇತ್ರ ಉಳಿಸಲು ರಣಕಣಕ್ಕಿಳಿದ ಹೆಚ್ಡಿಕೆ
ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಹುಣಸೂರು ಪಟ್ಟಣದಲ್ಲಿ ಇಂದು ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಲಿದೆ.
ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಇಂದು ಸೋಮಶೇಖರ್ ನಾಮಪತ್ರ ಸಲ್ಲಿಸಲಿದ್ದಾರೆ. ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಲಿರುವ ಸೋಮಶೇಖರ್ ದೇವರಹಳ್ಳಿ ಜೊತೆಗೆ ಕ್ಷೇತ್ರ ಉಳಿಸಿಕೊಳ್ಳಲು ಮಾಜಿ ಸಿಎಂ ಹೆಚ್ಡಿಕೆ ರಣಕಣಕ್ಕಿಳಿದಿದ್ದಾರೆ.
ಜೊತೆಗೆ ಅಭ್ಯರ್ಥಿ ಜೊತೆ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಸಚಿವ ಜಿಟಿಡಿ, ಮಾಜಿ ಸಿಎಂ ಸಿದ್ದರಾಮಯ್ಯಗೂ ಟಾಂಗ್ ನೀಡಲು ಹೆಚ್ಡಿಕೆ ಹುಣಸೂರು ಅಖಾಡಕ್ಕಿಳಿದಿದ್ದಾರೆ. ಬಿಜೆಪಿ ಸೋಲಿಸಿ ಹೆಚ್.ವಿಶ್ವನಾಥ್ಗೆ ಕಾಂಗ್ರೆಸ್ ಸೋಲಿಸಿ ಸಿದ್ದುಗೆ ಮುಖಭಂಗ ಮಾಡಲು ಸಿದ್ದತೆ ನಡೆಯುತ್ತಿದೆ.
ಸೋಮಶೇಖರ್ ತನ್ನ ಅಭ್ಯರ್ಥಿ ಎಂದು ಬಿಂಬಿಸಲು ಬೃಹತ್ ಮೆರವಣಿಗೆ ಆಯೋಜನೆ ಮಾಡಿದ್ದಾರೆ. ಸೋಮಶೇಖರ್ ಪರ ಹುಣಸೂರಿನಲ್ಲಿ ಮತ್ತೊಮ್ಮೆ ರ್ಯಾಲಿ ಮಾಡುವುದಾಗಿ ಭರವಸೆ ಕೊಟ್ಟಿರುವ ಹೆಚ್ಡಿಕೆ, ಹುಣಸೂರು ಕ್ಷೇತ್ರ ಕೈ ಬಿಟ್ಟು ಹೋಗದಂತೆ ರಣತಂತ್ರ ರೂಪಿಸಿದ್ದಾರೆ.
ಹುಣಸೂರು ಗೆಲುವಿನ ಉಸ್ತುವಾರಿಯನ್ನ ಸಾ.ರಾ.ಮಹೇಶ್ಗೆ ಹೆಚ್ಡಿಕೆ ನೀಡಿದ್ದಾರೆ. ಶತಾಯಗತಾಯ ಹುಣಸೂರಿನಲ್ಲಿ ಜೆಡಿಎಸ್ ಗೆಲ್ಲಿಸಲು ಭರದ ಸಿದ್ದತೆ ನಡೆಸಿದ್ದಾರೆ.