‘ಹೂ ವಿಲ್ ಸೇವ್ ದಿಸ್ ಎಕಾನಮಿ’ ಕೇಂದ್ರ ಸರ್ವಕಾರವನ್ನು ಕೆಣಕಿದ ಶತ್ರುಘ್ನ ಸಿನ್ಹಾ
ಕೇಂದ್ರ ಸರ್ಕಾರವನ್ನು ಆಗಿಂದಾಗ್ಗೆ ಕಾಡುವ ಬಿಜೆಪಿ ಮಾಜಿ ನಾಯಕ ಶತ್ರುಘ್ನ ಸಿನ್ಹಾ ಈಗ ಆರ್ಥಿಕ ವ್ಯವಸ್ಥೆ ವಿಚಾರವಾಗಿ ಮತ್ತೆ ಹರಿಹಾಯ್ದಿದ್ದಾರೆ. ಹೂ ವಿಲ್ ಸೇವ್ ದಿಸ್ ಎಕಾನಮಿ ಎಂದು ಅವರು ಕೇಂದ್ರವನ್ನು ಕೆಣಕಿದ್ದಾರೆ.
ಆಗಸ್ಟ್ 15ರ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಟ್ವಿಟ್ಟರ್ ಮೂಲಕ ಶ್ಲಾಘಿಸಿದ್ದ ಶತ್ರುಘ್ನ ಸಿನ್ಹಾ ಈಗ ತಿರುಗಿ ಬಿದ್ದಿದ್ದಾರೆ.
ಸರ್, ದೇಶದ ಆರ್ಥಿಕ ಕುಸಿತದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ನಾವು ಏನಾದರೂ ಮಾಡಬೇಕೆಂದು ನಿಮಗೆ ಅನಿಸಿಲ್ಲವೇ…..ಎಂದು ಮೋದಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಅವರು ಬಳಿಕ ಸರಣಿ ಟ್ವೀಟ್ ಮಾಡಿ ಕೆಣಕಿದ್ದಾರೆ.
ಕೃಷಿ, ಮೊಬೈಲ್, ವಿಮಾನಯಾನ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಂಟಾಗಿರುವ ಆತಂಕವನ್ನು ಅವರು ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.