OMG : ಶಾಲಾ ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ವಿದ್ಯಾರ್ಥಿ…!
ಶಾಲಾ ಶಿಕ್ಷಕಿ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದಿದೆ.
ಶಾಲಾ ಶಿಕ್ಷಕಿ ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಯ ಕಣ್ಣಿಗೆ ಹೊಡೆದಿದ್ದರಿಂದ ವಿದ್ಯಾರ್ಥಿಯ ಕಣ್ಣೇ ಮಾಯವಾಗಿದೆ. ಎಲ್.ಕೆ.ಜಿ.ವಿದ್ಯಾರ್ಥಿ ಮನಿಷ್ ಕಣ್ಣಿಗೆ ಏಟು ತಿಂದ ಹುಡುಗ. ಕಣ್ಣಿಗಾದ ಗಾಯದಿಂದ ದೃಷ್ಟಿ ಕಳೆದುಕೊಂಡಿರೊ ವಿದ್ಯಾರ್ಥಿ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ದ ಆಕ್ರೋಶಗೊಂಡಿದ್ದಾರೆ.
ಈ ಘಟನೆ ಅಗಸ್ಟ್ 13 ರಂದು ನಡೆದಿದೆ. ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಬ್ಬಿಣದ ಸ್ಕೇಲ್ ನಿಂದ ಹಲ್ಲೆ ಮಾಡಿರೋ ಬಗ್ಗೆ ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಜಾ ವಿರುದ್ದ ಪೋಷಕರು ದೂರು ನೀಡಿದ್ದಾರೆ.
ಹಾಸನ ನಗರ ಠಾಣೆಯಲ್ಲಿ ಶಾಲಾ ಶಿಕ್ಷಕಿ ದಿವ್ಯ, ಅಡಳಿತ ಮಂಡಳಿಯ ಗಿರಿಜಾ, ಡಾ: ಶಿವೇಗೌಡ, ವೆಂಕಟೇಗೌಡ ಒಟ್ಟು ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.