ತಂದೆ ತಾಯಿ ಮದುವೆ ಮಾಡಲಿಲ್ಲ‌ ಎಂಬ ಕಾರಣಕ್ಕೆ ಮಗ ಮಾಡಿದ್ದು ಇಂಥ ಕೆಲಸ….!

ವಿಜಯಪುರ ಜಿಲ್ಲೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮದುವೆ ಮಾಡಲಿಲ್ಲ‌ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆ ತಾಯಿ ಮೇಲೆ ಮಗ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ‌ಬಸವನ ಬಾಗೇವಾಡಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ.

ಹೌದು…  ವೃದ್ದ ತಂದೆ ತಾಯಿಯ ಮೇಲೆ ಮಗ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಶರಣಮ್ಮ ಹಿರೇಮಠ?70), ಹೇಮಯ್ಯ ಹಿರೇಮಠ(75) ಹಲ್ಲೆಗೊಳಗಾದ ಪೋಷಕರು. ಹೇಮಯ್ಯ ಅವರ ಎರಡನೇ ಮಗ ಶಂಕ್ರಯ್ಯ ಹಿರೇಮಠ (40) ಹಲ್ಲೆ ಮಾಡಿದ ಪುತ್ರ.

ಮದುವೆ ಮಾಡುವಂತೆ ವೃದ್ದ ತಂದೆ-ತಾಯಿ ಜೊತೆ ಪ್ರತಿದಿನ ಗಲಾಟೆ ಮಾಡುತ್ತಿದ್ದ ಶಂಕ್ರಯ್ಯ ಹಿರೇಮಠನಿಗೆ ಮೊದಲು ದುಡಿದು‌‌ ಜೀವನ ನಡೆಸು, ಆ ಮೇಲೆ ಮದುವೆ ಎಂದು ಪೋಷಕರು ತಿಳಿ ಹೇಳುತ್ತಿದ್ದರು. ಯಾವುದೇ ದುಡಿಮೆ ಇಲ್ಲದೆ ಊರಲ್ಲಿ‌ ಖಾಲಿ ಸುತ್ತಾಡುತ್ತಿದ್ದ ಶಂಕ್ರಯ್ಯ ಹಿರೇಮಠನಿಗೆ ಪೋಷಕರು ದುಡಿಮೆ ಇಲ್ಲದ ಕಾರಣ ಮದುವೆ ಮಾಡಲು ನಿರಾಕರಿಸಿದ್ದರು.  ಇದರಿಂದ ಸಿಟ್ಟಾಗಿ ಕಳೆದ ರಾತ್ರಿ ತಂದೆ-ತಾಯಿ ಜೊತೆ ‌ಗಲಾಟೆ ಮಾಡಿದ‌‌ ಶಂಕ್ರಯ್ಯ ಹಿರೇಮಠ, ಮಾತಿಗೆ ಮಾತು ಬೆಳೆದು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಕಣ್ಣು, ತಲೆ, ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ವೃದ್ದ ದಂಪತಿ ನರಳಾಡುತ್ತಿದ್ದು,  ವಿಜಯಪುರ ಜಿಲ್ಲಾಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ತಾಯಿ ಮೇಲೆ ಹಲ್ಲೆ ಬಳಿಕ ಬ್ಲೇಲ್ಡ್ ನಿಂದ ತಾನೇ ಹಲ್ಲೆ ಮಾಡಿಕೊಂಡಿದ್ದಾನೆ. ತಲೆ ಹಾಗೂ ಕೈಗೆ ಬ್ಲೆಡ್ ನಿಂದ ಗಾಯ ಮಾಡಿಕೊಂಡಿರುವ ಶಂಕ್ರಯ್ಯನಿಗೂ ಗ್ರಾಮಸ್ಥರು ವಿಜಯಪುರ ಜಿಲ್ಲಾ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights