ಮುಸ್ಲಿಂರೆ ನೀವು ಕಾಂಗ್ರೆಸ್ ಮಾತನ್ನು ಕೇಳುವುದನ್ನು ನಿಲ್ಲಿಸಿ – ಪ್ರತಾಪ್ ಸಿಂಹ
ಮುಸ್ಲಿಂರೆ ನೀವು ಕಾಂಗ್ರೆಸ್ ಮಾತನ್ನು ಕೇಳುವುದನ್ನು ನಿಲ್ಲಿಸಿ. ನಿಮ್ಮನ್ನು ಕಾಂಗ್ರೆಸ್ ನವರು ಮೊಹಲ್ಲದಲ್ಲೆ ಇಟ್ಟಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈಗಲಾದ್ರು ಸಬ್ ಕಾ ಸಾಥ್ ವಿಕಾಸ್ ಜೊತೆ ಬನ್ನಿ. ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಪರಿಣಾಮ ಕರ್ನಾಟಕದಲ್ಲಿ ಆಗಬಾರದು ಅಂತ 144 ಸೆಕ್ಷನ್ ಹಾಕಲಾಗಿದೆ. ನಾನು ಪೊಲೀಸರಿಗೆ ಮನವಿ ಮಾಡುತ್ತೇನೆ. 144 ಸೆಕ್ಷನನ್ನ ನಾನಾಗಲಿ ಬಿಜೆಪಿಯವರಿಗಾಗಲಿ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ.
ಕಾಯ್ದೆ ತಿದ್ದುಪಡಿಯಿಂದ ಯಾವ ಮುಸ್ಲಿಂಮರಿಗು ಸಮಸ್ಯೆ ಇಲ್ಲ. ಯಾರು ಪ್ರಚೋದನೆಗೆ ಒಳಗಾಗಬೇಡಿ. ಕಾಂಗ್ರೆಸ್ ಹತಾಶೆಯಿಂದ ಈ ಗಲಭೆ ಸೃಷ್ಟಿಸಿದೆ. ನಾವು ತುಳಿತಕ್ಕೊಳಗಾದ ಅಲ್ಪಸಂಖ್ಯಾತರನ್ನ ರಕ್ಷಣೆ ಮಾಡ್ತೀದ್ದೀವಿ. ಇದು ತಪ್ಪಾಗಿ ಅರ್ಥೈಸುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ಗಲಭೆಗಳ ನೈತಿಕ ಹೊಣೆ ಹೊತ್ತು ಖಾದರ್ರನ್ನ ಉಚ್ಚಾಟನೆ ಮಾಡಲಿ. 144 ಸೆಕ್ಷನ್ ಉಲ್ಲಂಘನೆ ಮಾಡಿ ಶಾಂತಿ ಭಂಗ ತಂದ ಯಾರೇ ಆಗಲಿ ಕ್ರಮ ಕೈಗೊಳ್ಳಲಿ.
ಪ್ರಧಾನಿಮೋದಿ ಎಲ್ಲಾ ಸಂಧರ್ಭದಲ್ಲು ಬಂದು ಮಾತನಾಡಲು ಸಾಧ್ಯವಿಲ್ಲ. ಅವರ ಕೆಲಸ ಮಾತನಾಡಿದ್ರೆ ಸಾಕು. ದೇಶದ ಜನರಿಗೆ ತೊಂದರೆಯಾಗಲ್ಲ ಅಂತ ಮೋದಿ ಹೇಳಿದ್ದಾರೆ. ಅಮಿತ್ ಶಾ ಕೂಡ ಸ್ಪಷ್ಟವಾಗಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಬಿಜೆಪಿಯವರು ಈ ಬಗ್ಗೆ ಅಭಿಯಾನ ಮಾಡುತ್ತೇವೆ. ಮಾಧ್ಯಮಗಳ ಸಹಕಾರ ಕೇಳುತ್ತೇನೆ ಎಂದಿದ್ದಾರೆ.