ಮೋದಿಯ ಕಾರ್ಪೋರೆಟ್ ಮಿತ್ರರಿಗೆ ದೇಶದ ಸಂಪತ್ತು ನೀಡುವ ಹುನ್ನಾರ ಬಜೆಟ್ನಲ್ಲಿದೆ: ರಾಹುಲ್ಗಾಂಧಿ
ಸೋಮವಾರ ಕೇಂದ್ರ ವಿತ್ತ ಸಚಿವೆ 2021ನೇ ಸಾಲಿನ ಬಜೆಟ್ ಅನ್ನು ಮಂಡಿಸಿದ್ದು, ಈ ಬಜೆಟ್ ಮೂಲಕ ದೇಶದ ಸಂಪತ್ತನ್ನು ಬಂಡವಾಳಶಾಹಿ ಕಾರ್ಪೊರೇಟ್ ಮಿತ್ರರಿಗೆ ಹಸ್ತಾಂತರಿಸ ಪ್ರಧಾನಿ ನರೇಂದ್ರ ಮೋದಿ ಅವರು ಯೋಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟಿಸಿರುವ ರಾಹುಲ್, ಜನರ ಕೈಗಳಿಗೆ ಹಣವನ್ನು ನೀಡುವುದು ಮರೆತು ಬಿಡಿ. ನರೇಂದ್ರ ಮೋದಿ ಸರ್ಕಾರ ಭಾರತದ ಸಂಪತ್ತನ್ನು ತನ್ನ ಆತ್ಮೀಯ ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದ್ದಾರೆ.
Forget putting cash in the hands of people, Modi Govt plans to handover India's assets to his crony capitalist friends.#Budget2021
— Rahul Gandhi (@RahulGandhi) February 1, 2021
ಕೇಂದ್ರ ಸರ್ಕಾರದ ಈ ಬಜೆಟ್ ಆತ್ಮ ನಿರ್ಭರ ಬಜೆಟ್ ಅಲ್ಲ, ಆತ್ಮ ಬರ್ಬರ ಬಜೆಟ್ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಒಂದು ಟ್ವೀಟ್ ಮಾಡಿದ್ದ ರಾಹುಲ್ಗಾಂಧಿ, ಬಜೆಟ್ನಲ್ಲಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಿಗೆ (ಎಂಎಸ್ಎಂಇ) ಬೆಂಬಲ, ರೈತರು ಮತ್ತು ಕೆಲಸಗಾರರಿಗೆ ಒತ್ತು ಕೊಡುವ ಮೂಲಕ ಉದ್ಯೋಗ ಸೃಷ್ಟಿಸಬೇಕು. ಜೀವಗಳ ರಕ್ಷಣೆಗಾಗಿ ಆರೋಗ್ಯ ಸುರಕ್ಷತಾ ವಲಯಕ್ಕಾಗಿ ಅನುದಾನ ಹೆಚ್ಚಿಸಬೇಕು. ದೇಶದ ಗಡಿಗಳ ರಕ್ಷಣೆಗಾಗಿ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತುಕೊಡಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಮ.ಪ್ರದೇಶ BJPಯಲ್ಲಿ ಸಿಂಧಿಯಾ ಬೆಂಬಲಿಗರ ಬಂಡಾಯ?; ಬಿಜೆಪಿ ಉಸ್ತುವಾರಿ ಹೇಳಿದ್ದೇನು?