ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಶವ ಪತ್ತೆ….!
ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಶವ ಪತ್ತೆಯಾಗಿವೆ. ಮೂರು ದಿನಗಳ ಹಿಂದೆ ಮೈಸೂರು ತಾಲ್ಲೂಕಿನ ಸಾಗರಕಟ್ಟೆ ಸೇತುವೆಯಿಂದ ನದಿಗೆ ಹಾರಿದ್ದ ಪ್ರೇಮಿಗಳು ಶವ ಪತ್ತೆಯಾಗಿದೆ.
ಶಿವಕುಮಾರ್ (24 ) ,ರಂಜಿತಾ ( 21) ಇಬ್ಬರು ಮೈಸೂರಿನ ವಿಜಯನಗರ ಬಡಾವಣೆ ನಿವಾಸಿಗಳು. ಜಗಳ ಮಾಡಿಕೊಂಡು ಸೇತುವೆಯಿಂದ ನದಿಗೆ ಹಾರಿದ್ದ ರಂಜಿತಾ. ಇದರಿಂದ ಗಾಬರಿಗೊಂಡು ತಾನು ನದಿಗೆ ಹಾರಿದ್ದ ಶಿವಕುಮಾರ್ ಎನ್ನಲಾಗಿದೆ.
ಸೇತುವೆಯಿಂದ 2 ಕಿಲೋ ಮೀಟರ್ ದೂರದ ರಾಮೇನಹಳ್ಳಿ ಬಳಿ ಶವ ಪತ್ತೆಯಾಗಿದೆ. ನುರಿತ ಈಜುಗಾರರು ,ಅಗ್ನಿಶಾಮಕ ಸಿಬ್ಬಂದಿಗಳ ನೆರವಿನಿಂದ ಶವ ಪತ್ತೆ ಮಾಡಲಾಗಿದ್ದು, ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.