ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದ ಶಿಕ್ಷಕರು : ಕಾಂಪೌಂಡ್ ಹತ್ತಿ ಒಳಹೋದ ಮಕ್ಕಳು
ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಗೆ ಬಾರದ ಕಾರಣ ಮಕ್ಕಳು ಶಾಲೆಯ ಕಾಂಪೌಂಡ್ ಹತ್ತಿ ಒಳಗೆ ಹೋದ ಘಟನೆ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಪಟ್ಟಣದ ಕೆರೆ ಪಕ್ಕದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಹೌದು…. 11 ಗಂಟೆ ಸಮಯವಾದರೂ ಶಾಲೆಯ ಗೇಟ್ ತೆಗೆಯದ ಕಾರಣ ಮಕ್ಕಳು ಶಾಲೆಯ ಕಾಂಪೌಂಡ್ ಹಾರಿ, ಗೇಟಿನೊಳಗಿನ ಕಂಡಿಯೊಳಗೆ ನುಗ್ಗಿ ಶಾಲಾ ಆವರಣ ಪ್ರವೇಶಿಸಿದ ದೃಶ್ಯ ಸದ್ಯ ವೈರಲ್ ಆಗಿದೆ.
ನಿಗಧಿತ ಸಮಯಕ್ಕೆ ಶಾಲೆಗೆ ಬಾರದ ಶಿಕ್ಷಕರ ವಿರುದ್ದ ಕ್ರಮಕ್ಕೆ ಸಾರ್ವಜನಿಕರ ಆಗ್ರಹಿಸಿದ್ದಾರೆ.