ಘಟನೆ ನಡೆದು ಎರಡು ತಿಂಗಳ ಬಳಿಕ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ….!

ಅಪಘಾತ ಘಟನೆ ನಡೆದು ಎರಡು ತಿಂಗಳ ಬಳಿಕ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆಯಾಗಿದೆ.

ಹೌದು..  ಆಗಸ್ಟ್ 10 ರಂದು ತುಂಬಿ ಹರಿಯುತ್ತಿದ್ದ ಶಿವಮೊಗ್ಗ ತಾಲೂಕಿನ ಕುಮುದ್ವತಿ ನದಿ ವೀಕ್ಷಿಸುತ್ತಿದ್ದ ವೇಳೆ ಬೊಲೆರೋ ವಾಹನ ಡಿಕ್ಕೆ ಹೊಡೆದಿತ್ತು. ಪರಿಣಾಮ ನಾಲ್ಕು ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ನಾಗರಾಜ್ ನನ್ನು ಸ್ಥಳೀಯರು ರಕ್ಷಿಸಿದ್ದರು. ರಾಮಪ್ಪ ಅವರ ಶವ ಆಗಸ್ಟ್ ೧೧ ಕ್ಕೆ ದೊರೆತಿತ್ತು. ಅಮರನಾಥ್ ಮತ್ತು ಹರೀಶ್ ಗಾಗಿ ಶವ ಪತ್ತೆಯಾಗಿರಲಿಲ್ಲ. ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು.

ಎನ್ ಡಿ ಆರ್ ಎಫ್ ತಂಡ, ಅಗ್ನಿ ಶಾಮದ ದಳ ಮತ್ತು ಸ್ಥಳೀಯ ಮೀನುಗಾರರು ಶೋಧಕಾರ್ಯ ನಡೆಸಿದ್ದರು. ಶವ ಸಿಗದ ಹಿನ್ನಲೆಯಲ್ಲಿ ಶೋಧ ಕಾರ್ಯ ಸ್ಥಗಿತ ಗೊಳಿಸಿದ್ದರು. ಘಟನೆ ನಡೆದು ಎರಡು ತಿಂಗಳ ಬಳಿಕ ಇಂದು ದೊಡ್ಡಿಮಟ್ಟಿ ಬಳಿ ಆಂಜನಾಪುರ ಜಲಾಶಯದ ಹಿನ್ನೀರಿನಲ್ಲಿ ಅಮರನಾಥ್ ಶವ ಪತ್ತೆಯಾಗಿದೆ‌.

ಕುಂಸಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights