ಮ್ಯಾಗಜೀನ್ ಸಂಪಾದಕ ಎಸ್.ಗುರುಮೂರ್ತಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ…..

ಖ್ಯಾತ ಪತ್ರಕರ್ತ, ತುಘಲಕ್ ಮ್ಯಾಗಜೀನ್ ಸಂಪಾದಕ ಎಸ್.ಗುರುಮೂರ್ತಿ ಮೇಲೆ 9 ಮಂದಿ ದುಷ್ಕರ್ಮಿಗಳು ದಾಳಿಗೆ ಯತ್ನಿಸಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.

ಚೆನ್ನೈ ನಲ್ಲಿರೋ ಗುರುಮೂರ್ತಿ ನಿವಾಸದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ 9 ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ದಾಳಿಗೆ ಯತ್ನಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿಗಳು ದುಷ್ಕರ್ಮಿಗಳ ದಾಳಿ ತಡೆದಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚೆನ್ನೈ ಪೊಲೀಸರು ತನಿಖೆ ಶುರು ಮಾಡಿದ್ದು, ಆರೋಪಿಗಳ ಪತ್ತೆಗಾಗಿ ತೀವ್ರ ತಲಾಶ್ ನಡೆಸುತ್ತಿದ್ದಾರೆ. ತುಘಲಕ್ ಮ್ಯಾಗಜೀನ್ ಸಂಪಾದಕರಾಗಿರೋ ಗುರುಮೂರ್ತಿ ಆರ್ ಎಸ್ ಎಸ್ ನಲ್ಲೂ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights