ಬಾಲ್ಯದಲ್ಲಿ ಕೈಗೊಂಬೆ ಆಟ ನೋಡಿರಲಿಲ್ಲ; ಈಗ ನೋಡುತ್ತಿದ್ದೇನೆ: ಕ್ರಿಕೆಟಿಗ ಮನೋಜ್ ತಿವಾರಿ

ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಜಗತ್ತಿನಾದ್ಯಂತ ಬೆಂಬಲ ವ್ಯಕ್ತವಾಗಿದೆ. ನಿನ್ನೆ (ಬುಧವಾರ) ರೈತರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದ ಹಾಲಿವುಡ್‌ ಪಾಪ್‌ ಸಿಂಗರ್‌ ರಿಹಾನಾ ಟ್ವೀಟ್‌ ಇಡೀ ಜಗತ್ತು ರೈತರತ್ತ ನೋಡುವಂತೆ ಮಾಡಿದೆ. ಹೀಗಾಗಿ ಬೆಚ್ಚಿಬಿದ್ದಿರುವ ಬಿಜೆಪಿ ಬೆಂಬಲಿಗರು ಸರ್ಕಾರದ ಪರವಾಗಿ ಟ್ವೀಟ್‌ ಮಾಡಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಭಾರತದ ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಬಾಲಿವುಡ್ ನಟ ನಟಿಯರು, ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಸರ್ಕಾರವನ್ನು ಕ್ಲೈಮ್‌ ಮಾಡಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಮಾಜಿ ಆಟಗಾರ ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್ ಮುಂತಾದವರು ಟ್ವೀಟ್ ಮಾಡಿದ್ದರು.

ಈ ಕುರಿತು ವ್ಯಂಗ್ಯವಾಗಿ ಸರ್ಕಾರವನ್ನು ಬೆಂಬಲಿಸಿದ್ದವ ಕಾಲೆಳೆದಿರುವ ಖ್ಯಾತ ಕ್ರಿಕೆಟಿಗ ಮನೋಜ್ ತಿವಾರಿ, “ನಾನು ಸಣ್ಣವನಿದ್ದಾಗ ಕೈಗೊಂಬೆಗಳ ಪ್ರದರ್ಶನವನ್ನು ನಾನು ನೋಡಿರಲಿಲ್ಲ. ಆದರೆ ಈಗ 35 ವರ್ಷಗಳ ಬಳಿಕ ನೋಡುವ ಅವಕಾಶ ದೊರಕಿದೆ” ಎಂದು ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದಾರೆ.

https://twitter.com/tiwarymanoj/status/1357243083205795842?s=20

“ಈ ಟ್ವೀಟ್ ಅನ್ನು ಡಿಲೀಟ್ ಮಾಡು ಎಂದು ಕೆಲ ಹೊತ್ತಿನಲ್ಲೇ ಮೋಟಾ ಭಾಯ್ (ಅಮಿತ್ ಶಾ) ಕರೆ ಮಾಡಿ ಹೇಳಬಹುದು” ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದರೆ, “ಬೆಳಗ್ಗಿನ ವಾಕ್ ಹೋಗುವಾಗ ಎಚ್ಚರಿಕೆ ವಹಿಸಿ, ನಿಮಗೆ ಒಳ್ಳೆಯದಾಗಲಿ ಎಂದು ಅಭಿಮಾನಿಯೋರ್ವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡಬಾರದು ಎಂದ ಪ್ರಖ್ಯಾತ ಗಾಯಕಿ: ಯಾರು ಈ ರಿಹಾನಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights