ನಾಪತ್ತೆಯಾದ ನವ ವರ ಕೊಲೆಯಾಗಿ ಶವವಾಗಿ ಪತ್ತೆ….
ನಾಪತ್ತೆಯಾದ ನವ ವರ ಕೊಲೆಯಾಗಿ ಶವವಾಗಿ ಪತ್ತೆಯಾದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ. ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ಮಂಜು (29) ಕೊಲೆಯಾಗಿದ್ದ ದುರ್ದೈವಿ ಶವವಾಗಿ ಪತ್ತೆಯಾಗಿದ್ದಾನೆ. ಮಂಜು ಮಂಡ್ಯದ ಸಿದ್ಧಯ್ಯನಕೊಪ್ಪಲು ಗ್ರಾಮದ ನಿವಾಸಿ. ಸೆ.18ರಂದು ತನ್ನದೇ ಊರಿನ ಅರ್ಚನಾರಾಣಿ ಎಂಬುವರನ್ನು ಪ್ರೀತಿಸಿ ಮದ್ವೆಯಾಗಿದ್ದರು. ಅರ್ಚನಾ ಪೋಷಕರ ವಿರೋಧದ ನಡೆವೆ ಶಿವಮೊಗ್ಗದ ಶಿಕಾರಿಪುರದಲ್ಲಿ ಮದ್ವೆ ನಡೆದಿತ್ತು.
ಇಬ್ಬರ ಪ್ರೀತಿ ವಿರೋಧಿಸಿದ ಪೋಷಕರು ಅರ್ಚನಾಳಿಗೆ ಕಿರಣ್ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿದ್ದರು. ಕಿರಣ್ ಮದ್ದೂರಿನ ರುದ್ರಾಕ್ಷಿಪುರ ನಿವಾಸಿ. ಕಿರಣ್ ಜೊತೆ ನಿಶ್ಚಿತಾರ್ಥ ಬಳಿಕ ಅದ್ದೂರಿ ಮದುವೆಗೆ ಸಿದ್ದತೆ ನಡೆದಿತ್ತು. ಅರ್ಚನಾ-ಕಿರಣ್ ಪೋಷಕರು ಅ.23-24 ರಂದು ಮದುವೆ ದಿನಾಂಕ ನಿಗಧಿಮಾಡಿದ್ದರು.
ಸೆ.18ರಂದು ಶಿಕಾರಿಪುರದಲ್ಲಿ ಗುಟ್ಟಗಿ ಮದ್ವೆಯಾಗಿದ್ದ ಮಂಜು-ಅರ್ಚನಾ ಪೋಷಕರು ಜೊತೆ ಮಾತುಕತೆ ಮಾಡಿಕೊಂಡು ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಆಸ್ತಿ ಪತ್ರಕ್ಕೆ ಸಹಿಹಾಕಿಸಿಕೊಂಡು ಸಂಬಂಧ ಕಡಿದುಕೊಂಡಿದ್ದರು. ಬಳಿಕ ನವ ದಂಪತಿಗಳು ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ವಾಸವಿದ್ದರು. ನ-9ರ ಸಂಜೆ ಹಾಲು ತರೋದಾಗಿ ಹೇಳಿ ಹೋದ ಮಂಜು ನಾಪತ್ತೆಯಾಗಿದ್ದ.
ಪತ್ನಿ ಅರ್ಚನಾ ಪತಿ ಕಾಣೆಯಾದ ಬಗ್ಗೆ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ನಿನ್ನೆ ಹೊಳೆ ನರಸೀಪುರ ನದಿಯಲ್ಲಿ ಶವಪತ್ತೆಯಾದ ಬಗ್ಗೆ ಮಂಡ್ಯ ಪೋಲಿಸರಿಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವದ ಗುರುತು ಪತ್ತೆ ಹಚ್ಚುದ್ದ ಪತ್ನಿ ಅರ್ಚನಾ ಕೂಡ ಎರಡು ಕೈಗಳಲ್ಲಿದ್ದ ಅಚ್ಚೆಯಿಂದ ಮಂಜು ಶವ ಗುರುತಿಸಿದ್ದಾರೆ.
ಕುತ್ತಿಗೆ ಕುಯ್ದು ಕೊಲೆಮಾಡಿದ ದುಷ್ಕರ್ಮಿಗಳು ದೇಹಕ್ಕೆ ಹಗ್ಗ ಬಿಗಿದು ದೇಹ ತೇಲದಂತೆ ಕಲ್ಲು ಕಟ್ಟಿ ನದಿ ನೀರಿಗೆ ಎಸೆದಿದ್ದರು. ಅರ್ಚನಾ ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸಿದ ಮೃತ ಮಂಜು ಪೋಷಕರು, ಅರ್ಚನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಿರಣ್ ಎಂಬುವನೇ ಮಂಜು ಕೊಲೆಮಾಡಿದ್ದಾನೆಂದು ಆರೋಪ ಮಾಡಿದ್ದಾರೆ.