ಕೆಲವೇ ತಿಂಗಳಲ್ಲಿ ಇದಕ್ಕಿದ್ದಂತೆ ಹಲವರು ೧೧ ಜನ ಸಾವು : ಕಾರಣವೇನು ಗೊತ್ತಾ..?
ಅನಾರೋಗ್ಯ ಹಿನ್ನೆಲೆ ಕೆಲವೇ ತಿಂಗಳಲ್ಲಿ ಇದಕ್ಕಿದ್ದಂತೆ ಹಲವರು ಸಾವು ಸಂಭವಿಸಿರೋ ಘಟನೆ, ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಎನ್.ಚಮಕಲಹಳ್ಳಿಯಲ್ಲಿ ನಡೆದಿದೆ.
ಕಳೆದ ಕೆಲವು ತಿಂಗಳುಗಳಿಂದ ೧೧ ಜನ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ, ಮೃತಪಟ್ಟವರಲ್ಲಿ ವೃದ್ದರು, ಯುವಕರು ಹಾಗೂ ಗರ್ಭಿಣಿ ಸ್ತ್ರೀಯರಿದ್ದು, ಮತ್ತಷ್ಟು ಆತಂಕಕ್ಕೆ ಒಳಗಾದ ಗ್ರಾಮಸ್ಥರು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ, ದೂರು ಬಂದ ಹಿನ್ನೆಲೆ, ಜಿಲ್ಲಾ ಆರೋಗ್ಯ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ವೈದ್ಯರ ತಂಡ ಗ್ರಾಮದಲ್ಲಿ ಬೇಟಿ ಕೊಟ್ಟಿದ್ದು ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಮೇಲ್ನೋಟಕ್ಕೆ ಗ್ರಾಮದ ನೀರು ಹಾಗೂ ನೈರ್ಮಲ್ಯ ಕಾಪಾಡದ ಕಾರಣ ಸಾಂಕ್ರಾಮೊಕ ರೋಗಗಳಿಂದ ಸರಣಿ ಸಾವುಗಳು ಸಂಭವಿಸಿವೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ನಡೆದಿರೋ ಸರಣಿ ಸಾವುಗಳಿಗೆ ಕಾರಣ ತಿಳಿಯಲು ಗ್ರಾಮದ ಕುಡಿಯುವ ನೀರಿನ ಸ್ಯಾಂಪಲ್ ಸೇರಿದಂತೆ ಗ್ರಾಮದಲ್ಲಿ ಹಲವು ರೋಗಿಗಳ ರಕ್ತದ ಸ್ಯಾಪಂಲ್ ಅನ್ನು ವೈದ್ಯರು ಪಡೆದುಕೊಂಡಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಅಲ್ಲೇ ಬೀಡು ಬಿಟ್ಟಿರೋ ವೈದ್ಯರು, ಗ್ರಾಮದಲ್ಲಿನ ಎಲ್ಲಾ ಜನರನ್ನು ತಪಾಸಣೆಗೆ ಒಳಪಡಿಸಿ, ಉಳಿದ ರೋಗಿಗಳ ಮೇಲೆ ನಿಗಾ ವಹಿಸಿದ್ದಾರೆ.