‘ಕೈ’ ಪ್ರಚಾರದಲ್ಲಿ ಕಮಲಕ್ಕೆ ‘ಜೈ’ : ಇರಿಸು ಮುನಿಸು ಅನುಭವಿಸಿದ ಲಕ್ಷ್ಮೀ ಹೆಬ್ಬಾಳ್ಕರ್…!
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ.
ಹೌದು.. ನಿನ್ನೆ ರಾತ್ರಿ ಅಥಣಿ ಮತಕ್ಷೇತ್ರದ ಸತ್ತಿ ಜಿಲ್ಕಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರದ ವೇಳೆ ಈ ಘಟನೆ ನಡೆದಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾಷಣ ಆರಂಭಿಸಲು ಬರುತ್ತಿದ್ದಂತೆ ಕೆಲ ಕಾರ್ಯಕರ್ತರು ಮಹೇಶ್ ಕುಮಟಳ್ಳಿಗೆ ಜೈ ಎಂದು ಕೂಗಿದ್ದಾರೆ.
ಜೈಕಾರ ಕೂಗುತ್ತಿದ್ದಂತೆ ಇರಿಸು ಮುನಿಸು ಅನುಭವಿಸಿ ಕೆಲಕಾಲ ಸುಮ್ಮನೆ ನಿಂತ ಲಕ್ಷ್ಮಿ ಹೆಬ್ಬಾಳಕರ, ನಂತರ ಮತ್ತೆ ಕಾಂಗ್ರೆಸ್ ಗೆ ಜೈ ಎನ್ನುವ ಮೂಲಕ ಭಾಷಣ ಆರಂಭಿಸಿದರು. ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರದ ವೇಳೆ ಈ ಘಟನೆ ನಡೆದಿದೆ.