ಮದ್ದೂರಿನ ನಿಡಘಟ್ಟ ಬಳಿ ಕಾರಿನಲ್ಲಿ ದಾಖಲಾತಿ ಇಲ್ಲದ ೫೨.೬೦ ಲಕ್ಷ ನಗದು ವಶ….!
ಕಾರಿನಲ್ಲಿ ದಾಖಲಾತಿ ಇಲ್ಲದ ೫೨.೬೦ ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಹೌದು… ಮಂಡ್ಯ ಮದ್ದೂರಿನ ನಿಡಘಟ್ಟ ಬಳಿಯ ಚೆಕ್ ಪೋಸ್ಟ್ ಬಳಿ ತಮಿಳುನಾಡು ಮೂಲದ ಆದಿತ್ಯ ಎಂಬುವರ ಕಾರಿನಲ್ಲಿದ್ದ ೫೨.೬೦ ಲಕ್ಷ ರೂ ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಸಿಕ್ಕ ನಗದಿಗೆ ಯಾವುದೇ ದಾಖಲಾತಿ ನೀಡದ ಕಾರಣಕ್ಕೆ ಹಣ ಮತ್ತು ಕಾರ್ ಜಪ್ತಿ ಮಾಡಲಾಗಿದೆ.
ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಯ ನಡೆಸ್ತಿರುವ ಚೆಕ್ ಪೋಸ್ಟ್ ಅಧಿಕಾರಿಗಳು, ವಿಚಾರಣೆ ಬಳಿಕ ಯಾವುದೇ ಸೂಕ್ತ ಮಾಹಿತಿ ನೀಡದ ಕಾರಣ ಚಾಲಕನನ್ನು ಜಿಲ್ಲಾಧಿಕಾರಿಗಳ ಮುಂದೆ ಹಾಜರು ಪಡಿಸಿದ್ದಾರೆ.
ಉಪಚುನಾವಣೆ ಇರುವುರಿಂದ ಈ ಹಣ ಸಾಗಿಸಲಾಗುತ್ತಿತ್ತೆ ಎಂದು ಶಂಕಿಸಲಾಗಿದೆ.