ಯಡಿಯೂರಪ್ಪ ನಿಮಗೆ ತಾಕತ್ ಇದ್ರೆ ಎಲ್ಲಾ ಜಯಂತಿಗಳನ್ನು ರದ್ದು ಮಾಡಿ – ವಾಟಾಳ್ ಸವಾಲ್
ಟಿಪ್ಪು ಸುಲ್ತಾನ್ ವಿಷಯವನ್ನು ಪಠ್ಯ ಪುಸ್ತಕದಿಂದ ಕೈ ಬಿಡಬಾರದು ಎಂದು ಆಗ್ರಹಿಸಿ ಮೈಸೂರು ರೈಲ್ವೆ ನಿಲ್ದಾಣದ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡುತ್ತಿದ್ದಾರೆ. ಯಡಿಯೂರಪ್ಪ ನಿಮಗೆ ತಾಕತ್ ಇದ್ರೆ ಎಲ್ಲಾ ಜಯಂತಿಗಳನ್ನು ರದ್ದು ಮಾಡಿ ಎಂದು ಸಿಎಂ ಯಡಿಯೂರಪ್ಪಗೆ ವಾಟಾಳ್ ನಾಗರಾಜ್ ಸವಾಲ್ ಹಾಕಿದ್ದಾರೆ.
ಯಾವುದೇ ಪಕ್ಷದ ಮುಖ್ಯಮಂತ್ರಿ ಆದ್ರೂ ರಾಜ್ಯದ ಹಿತ ಕಾಯಬೇಕು. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ ಟಿಪ್ಪು ಜಯಂತಿ ರದ್ದು ಮಾಡಿದ್ರಿ. ಚರಿತ್ರೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಟಿಪ್ಪು ದೇಶಕ್ಕಾಗಿ ತಮ್ಮ ಮಕ್ಕಳನ್ನು ಒತ್ತೆ ಇಟ್ಟಿದ್ರು.
ಅಂತಹವರ ವಿಷಯವನ್ನು ಪಠ್ಯ ಪುಸ್ತಕದಲ್ಲಿ ತೆಗೆಯುಲು ಹೊರಟಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಯಡಿಯೂರಪ್ಪ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂದರು.
ಒಂದು ವೇಳೆ ಟಿಪ್ಪು ವಿಷಯವನ್ನು ಪಠ್ಯದಿಂದ ತೆಗೆದರೆ ಎಲ್ಲರೂ ದಂಗೆಯೇಳುತ್ತಾರೆ. ಕೆಲವು ಶಾಸಕರ ಮಾತು ಕೇಳಿ ನೀವು ಈ ರೀತಿಯ ತೀರ್ಮಾನ ಮಾಡಬೇಡಿ. ನೀವು ಸ್ವಂತ ನಿರ್ಧಾರ ತೆಗೆದುಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.