ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ನಾಲಿಗೆ ಹರಿಬಿಟ್ಟ ನಿವೃತ್ತ ಪ್ರಿನ್ಸಿಪಾಲ್….!
ನಿವೃತ್ತ ಪ್ರಿನ್ಸಿಪಾಲ್ ಸಂಸದನ ವಿರುದ್ಧ ನಾಲಿಗೆ ಹರಿಬಿಟ್ಟ ಘಟನೆ ಬುಧವಾರ ಕವಿಯನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ನಡೆದ ಪ್ರತಿಭಟನೆಯಲ್ಲಿ ನಡೆದಿದೆ.
ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ನಿವೃತ್ತ ಪ್ರಿನ್ಸಿಪಾಲ್ ವಿ.ಬಿ.ರಡ್ಡೇರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿವೃತ್ತ ಪ್ರಿನ್ಸಿಪಾಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗಿದೆ.
ಲೋಕಸಭೆ ಸದಸ್ಯ ಆಗಲು “ನಾಲಾಯಕ್” ಎಂದು ಹೇಳಿ ಸಾರ್ವಜನಿಕ ಸ್ಥಳದಲ್ಲಿ ಲೋಕಸಭೆ ಸದಸ್ಯರಿಗೆ “ಬೋಳಿಮಗ..” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಗಾಂಧೀಜಿಯ ಒಂದು ಕೂದಲು ಎಳೆಯಷ್ಟು ನೀವು ಸಮಾನರಲ್ಲ. ನಿಮ್ಮಲ್ಲಿ ಸ್ವಲ್ಪವೂ ಕೂಡ ದೇಶಭಕ್ತಿ ಇಲ್ಲ . ನೀವು ಹೊರಗಿನಿಂದ ಬಂದವರು ದೇಶದ್ರೋಹಿಗಳು ಎಂದು ನಿವೃತ್ತ ಪ್ರಿನ್ಸಿಪಾಲ್ ವಿ.ಬಿ.ರಡ್ಡೇರ ಅವಾಚ್ಯ ಶಬ್ದಗಳನ್ನಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದ ನೆಟ್ಟಿಗರು ಪ್ರಿನ್ಸಿಪಾಲ್ ವಿರುದ್ಧ ಏಕವಚನದಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.