‘ಜೈ’ ಕಾಂಗ್ರೆಸ್… ಸಾರಿ… ಬಿಜೆಪಿಗೆ ‘ಜೈ’ : ಭಾಷಣದ ವೇಳೆ ಎಂಟಿಬಿ ನಾಗರಾಜ್ ಎಡವಟ್ಟು
ಈ ಹಿಂದೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಎಂಟಿಬಿ ನಾಗರಾಜ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಗೆಲುವಿಗಾಗಿ ಕ್ಷೇತ್ರ ವ್ಯಾಪಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರುವ ಎಂಟಿಬಿ ನಾಗರಾಜ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ.
ಆದರೆ ತಾವು ಈ ಹಿಂದೆ ಶಾಸಕರಾಗಿದ್ದ ಕಾಂಗ್ರೆಸ್ ಪಕ್ಷವನ್ನು ಮರೆಯಲು ಅವರಿಗೆ ಇನ್ನೂ ಸಾಧ್ಯವಾಗುತ್ತಿಲ್ಲವೆನ್ನಲಾಗಿದ್ದು, ಹೀಗಾಗಿಯೇ ಪ್ರಚಾರ ಭಾಷಣದಲ್ಲಿ ಎಡವಟ್ಟು ಮಾಡಿದ್ದಾರೆ. ಜೈ ಹಿಂದ್ ಜೈ ಕಾಂಗ್ರೆಸ್ ಎಂದು ಎಂಟಿಬಿ ನಾಗರಾಜ್ ಹೇಳಿದ್ದು, ಕೊನೆಗೆ ಪಕ್ಕದಲ್ಲಿದ್ದವರು ಜೈ ಬಿಜೆಪಿ ಎಂದು ಹೇಳಿದ ಬಳಿಕ ತಪ್ಪಿನ ಅರಿವಾಗಿದೆ. ಆಗ ತಿದ್ದಿಕೊಂಡ ಎಂಟಿಬಿ ನಾಗರಾಜ್, ಎರಡು ಮೂರು ದಶಕದಿಂದ ಕಾಂಗ್ರೆಸ್ ನಲ್ಲಿದ್ದ ಕಾರಣ ಬಾಯಿತಪ್ಪಿ ಬಂದಿದೆ ಎಂದಿದ್ದಾರೆ.