ಬಿಜೆಪಿ ನೂತನ ಶಾಸಕರಿಗೆ ನಿರಾಸೆ : ಸದ್ಯಕ್ಕೆ ಸಂಪುಟ ರಚನೆ ಇಲ್ಲ ಎಂದ ಬಿಎಸ್ ವೈ..
ಇನ್ನೇನು ನಾಳೆ ನಾಡಿದ್ದು ನಾವು ಸಚಿವ ಸ್ಥಾನ ಅಲಂಕರಿಸುತ್ತೇವೆ ಅಂದುಕೊಮಡು ಬೀಗುತ್ತಿದ್ದ ಬಿಜೆಪಿ ನೂತನ ಶಾಸಕರಿಗೆ ನಿರಾಸೆಯಾಗಿದೆ.
ಉಪಚುನಾವಣೆಯ ಬಳಿಕ ಬಿಜೆಪಿ ಸರ್ಕಾರದ ಸಂಪುಟ ಸಂಪುಟ ರಚನೆಯಾಗುತ್ತದೆ ಎಂದು ಕಾದು ಕುಳಿತ ಬಿಜೆಪಿ ಶಾಸಕರಿಗೆ ಬಿಗ್ ಶಾಕ್. ಸದ್ಯಕ್ಕೆ ಸಂಪುಟ ರಚನೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಯಡಿಯೂರಪ್ಪ, ಅಮಿತ್ ಶಾ ಅವರ ಜತೆ ಚರ್ಚೆ ಬಳಿಕ ಸಂಪುಟ ವಿಸ್ತರಣೆ ಮಾಡಲು ನಿರ್ಧಾರ ಮಾಡಿದ್ದೇನೆ. ಅಮಿತ್ ಶಾ ಅವರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಇನ್ನೂ 4 ದಿನಗಳ ಕಾಲ ದೆಹಲಿಗೆ ಹೋಗುವುದಿಲ್ಲ. ಅಮಿತ್ ಶಾ ಪ್ರಚಾರ ಮುಗಿಸಿ ಬಂದ ಬಳಿಕ ದೆಹಲಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.