ಮೂರು ಕಾಡಾನೆಗಳಿಂದ ದಾಂಧಲೆ : ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ರಾತ್ರಿಯಿಡಿ ಮೂರು ಕಾಡಾನೆಗಳು ದಾಂಧಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿಯಿಂದ ಗ್ರಾಮದಲ್ಲೇ ಬೀಡು ಬಿಟ್ಟಿರುವ ಮೂರು ಕಾಡಾನೆಗಳು, ನಾಟಿ ಮಾಡಿದ್ದ ಗದ್ದೆಗಳಲ್ಲಿ ರಾತ್ರಿಯಿಡೀ ಕಾಡಾನೆಗಳ ರಂಪಾಟ ಮಾಡಿವೆ. ಇದರಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ನೂರಾರು ಬಾರಿ ದೂರು ನೀಡಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.
ನಿನ್ನೇ ಕೂಡ ಇದೇ ರೀತಿ ಕಾಡಾನೆಗಳು ದಾಂಧಲೆ ಮಾಡಿವೆ. ಇದರಿಂದ ಗದ್ದೆಗಳೆಲ್ಲಾ ನಾಶವಾಗಿದ್ದು, ಇದರಿಂದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ತಿಳಿಸಿದರೂ ಗ್ರಾಮಕ್ಕೆ ಅರಣ್ಯ ಇಲಾಖೆಯವರು ಮುಖ ಮಾಡಿಲ್ಲ. ಹೀಗಾಗಿ ಸೂಕ್ತ ಕ್ರಮಕ್ಕೆ ಸ್ಥಳೀಯರಯ ಆಗ್ರಿಹಿಸಿದ್ದಾರೆ.