ವಿಘ್ನೇಶ್ವರನಿಗೆ ಶಾಸಕರೇ ಸಾರಥಿ : ಗಣಪತಿ ಮೆರವಣಿಗೆಗೆ ಎಂಎಲ್‍ಎ ಡ್ರೈವರ್

ವಿಘ್ನೇಶ್ವರನಿಗೆ ಶಾಸಕರೇ ಸಾರಥಿಯಾದ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಗಣಪತಿ ಮೆರವಣಿಗೆಗೆ ಎಂಎಲ್‍ಎ ಡ್ರೈವರ್ ಆಗಿ ವಾಹನ ಚಲಾಯಿಸಿದ್ದಾರೆ. ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಟ್ರ್ಯಾಕ್ಟರ್ ಡ್ರೈವ್ ಆಗಿ ವಾಹನ ಚಲಾಯಿಸಿದ್ದಾರೆ. ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಟ್ರ್ಯಾಕ್ಟರ್ ಡ್ರೈವ್  ಮಾಡಿದ ಶಾಸಕರು ಸಾರ್ವಜನಿಕರ  ಮನ ಗೆದ್ದಿದ್ದಾರೆ.

61ನೇ ವರ್ಷದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪೇಟ ಧರಿಸಿದ ಶಾಸಕ ರಾಜೇಗೌಡ ಡ್ರೈವರ್ ಸೀಟಲ್ಲಿ ಕೂತು ಗಣನಾಯಕನಿಗೆ ಚಾಲಕನಾಗಿ ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ವಾಹನ ಚಲಾಯಿಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights