“ವಿದ್ಯಾರ್ಥಿಗಳು, ರೈತರು ಮೋದಿ ಸರ್ಕಾರಕ್ಕೆ ಶತ್ರುಗಳು, ಒಬ್ಬ ಮಾತ್ರ ಶ್ನೇಹಿತ” -ರಾಹುಲ್ ಗಾಂಧಿ
ಹೊಸ ಕೃಷಿ ಕಾನೂನು ವಿರೋಧಿಸಿ ರೈತರು ಕಳೆದ ಮೂರು ವಾರಗಳಿಂದ ದೆಹಲಿಗಡಿಭಾಗದಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ಕ್ಯಾರೇ ಅಂತಿಲ್ಲ. ಕೊರೆಯುವ ಚಳಿಯಲ್ಲಿ ರೈತರು ನರಳಾಡಿಕೊಂಡೇ ಹೋರಾಟದ ಕಿಚ್ಚಿನಲ್ಲಿ ದಿನಕಳೆಯುತ್ತಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಟ್ವೀಟ್ ನಲ್ಲಿ ”ಸರ್ಕಾರವನ್ನು ವಿರೋಧಿಸಿ ಧ್ವನಿ ಎತ್ತುವವರೆಲ್ಲರೂ ಶತ್ರುಗಳೆಂದು ಹಣೆಪಟ್ಟಿ ಕಟ್ಟಿದ್ದಾರೆ. ಕ್ರೋನಿ ಕ್ಯಾಪಿಟಲಿಸ್ಟ್ಸ್ ಮಾತ್ರ ಉತ್ತಮ ಸ್ನೇಹಿತರು” ಎಂದು ಹೇಳಿದ್ದಾರೆ. ಮಂಗಳವಾರ ಟ್ವೀಟ್ ನಲ್ಲಿ ರಾಹುಲ್ ಗಾಂಧಿ, “ಮೋದಿ ಸರ್ಕಾರಕ್ಕೆ ಭಿನ್ನಾಭಿಪ್ರಾಯದ ವಿದ್ಯಾರ್ಥಿಗಳು ರಾಷ್ಟ್ರ ವಿರೋಧಿಗಳು. ಸಂಬಂಧಪಟ್ಟ ನಾಗರಿಕರು ನಗರ ನಕ್ಸಲರು. ವಲಸೆ ಕಾರ್ಮಿಕರು ಕೋವಿಡ್ ವಾಹಕಗಳು. ಅತ್ಯಾಚಾರಕ್ಕೊಳಗಾದವರು ಯಾರೂ ಅಲ್ಲ. ಪ್ರತಿಭಟನಾ ರೈತರು ಖಲಿಸ್ತಾನಿಗಳು. ಆದರೆ ಕ್ರೋನಿ ಬಂಡವಾಳಶಾಹಿಗಳು ಮಾತ್ರ ಮೋದಿಗೆ ಉತ್ತಮ ಸ್ನೇಹಿತರು” ಎಂದು ಕಿಡಿ ಕಾರಿದ್ದಾರೆ. ರೈತರ ದಿನವಿಡೀ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೋಮವಾರ ಕೇಂದ್ರದ ಮೇಲೆ ದಾಳಿ ನಡೆಸಿದೆ. ಹೊಸ ಚುನಾವಣಾ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರ “ಚುನಾವಣಾ ಹಣಕಾಸುದಾರರ” ಕೈಗಳನ್ನು ಬಿಡಬೇಕು ಮತ್ತು ದೇಶದ ಆಹಾರ ಪೂರೈಕೆದಾರರ ಕೈ ಹಿಡಿಯಬೇಕು ಎಂದು ಹೇಳಿದೆ.
For Modi Govt:
Dissenting students are anti-nationals.
Concerned citizens are urban naxals.
Migrant labourers are Covid carriers.
Rape victims are nobody.
Protesting farmers are Khalistani.And
Crony capitalists are best friends.— Rahul Gandhi (@RahulGandhi) December 15, 2020
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಸುಮಾರು 32 ದಿನಗಳಿಂದ ರೈತ ಸಂಘಗಳ ಮುಖಂಡರು ದೆಹಲಿಯ ಸಿಂಗು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಾರೆ. ದೇಶಾದ್ಯಂತ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನಗಳನ್ನು ನಡೆಸಲಾಗಿದೆ. ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ, “73 ವರ್ಷಗಳಲ್ಲಿ ಮೊದಲ ಬಾರಿಗೆ ರಾಷ್ಟ್ರವನ್ನು ಪೋಷಿಸುವ ರೈತರು ದೇಶಾದ್ಯಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಇನ್ನೂ ಎಷ್ಟು ಒಳ್ಳೆ ದಿನಗಳನ್ನು ನೀವು ತರುತ್ತೀರಿ ಮೋದಿ ಜಿ!” ಎಂದು ವ್ಯಂಗ್ಯವಾಡಿದ್ದಾರೆ.
“ಚುನಾವಣಾ ಹಣಕಾಸುದಾರರ ಕೈಯಿಂದ ಬದಲಿಸಿ ಅನ್ನದಾತರ ಕೈಗಳನ್ನು ಹಿಡಿದುಕೊಳ್ಳಿ, ಅವರ ಕಣ್ಣೀರನ್ನು ಒರೆಸಿ ಮತ್ತು ಕ್ಷಮೆಯಾಚಿಸಿ, ಮೂರು ಕಪ್ಪು ಕಾನೂನುಗಳನ್ನು ಹಿಂತೆಗೆದುಕೊಳ್ಳಿ” ಎಂದು ಸುರ್ಜೆವಾಲಾ ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್ನಲ್ಲಿ, “ನಿಜವಾದ ‘ತುಕ್ಡೆ ತುಕ್ಡೆ ಗ್ಯಾಂಗ್’ ಯಾರು: ನಾಗರಿಕರನ್ನು ಸಮಾನರೆಂದು ನೋಡದವರು, ಸಮಾಜದಲ್ಲಿ ದ್ವೇಷವನ್ನು ಹರಡುವವರು, ತಮ್ಮೊಂದಿಗೆ ಭಯವನ್ನು ಹರಡುವವರು, ಗಾಡ್ಸೆಯನ್ನು ಹೊಗಳುವವರು … ನಮ್ಮ ರೈತರಲ್ಲ! ” ಎಂದಿದ್ದಾರೆ.
ರೈತರ ಪ್ರತಿಭಟನೆಗೆ ಮೋದಿ ಕಿವಿ ಕೊಡದಿದ್ದಾಗ ವಿರೋಧ ಪಕ್ಷದ ನಾಯಕರು ಧ್ವನಿ ಎತ್ತಲು ಶುರು ಮಾಡಿದ್ದಾರೆ. ರೈತರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಲು ಆರಂಭಿಸಿದ್ದಾರೆ.