ದೆಹಲಿಯಲ್ಲಿಂದು 24,000 ಕೊರೊನಾ ಕೇಸ್ : ಪ್ರಕರಣಗಳು ಹೆಚ್ಚಾದಂತೆ ಆಕ್ಸಿಜನ್, ಬೆಡ್ ಗಳ ಕೊರತೆ!

ದೆಹಲಿಯಲ್ಲಿ ಇಂದು 24,000 ಪ್ರಕರಣಗಳು ದಾಖಲಾಗಿದ್ದು ಆಕ್ಸಿಜನ್ ಮತ್ತು ಬೆಡ್ ಗಳ ಕೊರತೆ ಬಗ್ಗೆ ಅರವಿಂದ್ ಕೇಜ್ರಿವಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 24,000 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿರುವುದರಿಂದ ಹಾಸಿಗೆಗಳು, ಆಮ್ಲಜನಕ ಮತ್ತು ಔಷಧ ಕೊರತೆ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಪರೀಕ್ಷಿಸಲ್ಪಟ್ಟ ನಾಲ್ವರಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪರಿಸ್ಥಿತಿ ತುಂಬಾ ಗಂಭೀರ ಮತ್ತು ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು. “ಪ್ರಕರಣಗಳು ನಿಜವಾಗಿಯೂ ವೇಗವಾಗಿ ಏರಿವೆ.  ಕೆಲವು ದಿನಗಳ ಹಿಂದಿನವರೆಗೂ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ತೋರುತ್ತಿದ್ದರೂ ನಾವು ಕೊರತೆಯನ್ನು ಎದುರಿಸುತ್ತಿದ್ದೇವೆ. ಆದರೆ ಈ ಕರೋನಾ ಯಾವ ವೇಗದಲ್ಲಿ ಬೆಳೆಯುತ್ತಿದೆ, ಅದರ ಉತ್ತುಂಗ ಎಲ್ಲಿದೆ ಎಂದು ಯಾರಿಗೂ ತಿಳಿದಿಲ್ಲ” ಎಂದು ಅವರು ಹೇಳಿದರು.

“ಯಾವುದೇ ಆರೋಗ್ಯ ಮೂಲಸೌಕರ್ಯಗಳಿಗೆ ಮಿತಿಗಳಿವೆ. ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಮುಂದಿನ ಎರಡು ನಾಲ್ಕು ದಿನಗಳಲ್ಲಿ ನಾವು ಇನ್ನೂ 6,000 ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಅವರು ಹೇಳಿದರು.

ಭಾರತದಾದ್ಯಂತ ದಿನಕ್ಕೆ 2.3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿದ್ದು ಇದರಿಂದಾಗಿ ಅನೇಕ ರಾಜ್ಯಗಳು ಔಷಧಗಳು ಮತ್ತು ಆಸ್ಪತ್ರೆ ಹಾಸಿಗೆಗಳಿಗಾಗಿ ಹೆಣಗಾಡುತ್ತಿವೆ. ಈ ತಿಂಗಳಲ್ಲಿ ಕೇವಲ 20 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ಭಾರತ ಕಂಡಿದ್ದರಿಂದ ದೇಶವು ಸಾಂಕ್ರಾಮಿಕ ರೋಗವನ್ನು ಸೋಲಿಸಿರಬಹುದು ಎಂಬ ಭರವಸೆಗಳು ನಾಶವಾಗಿವೆ.

ಭಾರತ ಶನಿವಾರ 2.34 ಲಕ್ಷ ಪ್ರಕರಣಗಳನ್ನು ದಾಖಲಿಸಿ ಒಟ್ಟಾರೆ 1.45 ಕೋಟಿ ದಾಟಿದೆ. 1,341 ಸಾವುಗಳು ಒಟ್ಟು 175,649 ಕ್ಕೆ ತಲುಪಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights