FACT CHECK | ದುಬೈನಲ್ಲಿ ರಸ್ತೆಯೊಂದು ಕೊಚ್ಚಿಹೋದ ವಿಡಿಯೋವನ್ನು ಅಯೋಧ್ಯೆಯ ರಸ್ತೆ ಎಂದು ತಪ್ಪಾಗಿ ಹಂಚಿಕೆ
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಅಯೋಧ್ಯೆಯಲ್ಲಿ ಇತ್ತೀಚೆಗೆ ನಿರ್ಮಿಸಿದ ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇನ್ನೊಂದು ದೃಶ್ಯದಲ್ಲಿ ಕೆಲವರು ಮೊಣಕಾಲಿನವರೆಗೆ ನೀರು ತುಂಬಿದ ಅಂಡರ್ಪಾಸ್ ದಾಟುತ್ತಿರುವ ವಿಡಿಯೋವನ್ನು ಅಯೋಧ್ಯೆಯ ರಾಮಮಂದಿರ ಮಾರ್ಗದ ದೃಶ್ಯವನ್ನು ಕಣ್ತುಂಬಿಕೊಳ್ಳಿ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಭ್ರಷ್ಟಾಚಾರ ಶ್ರೀರಾಮನನ್ನು ಬಿಟ್ಟಿಲ್ಲ ಇದೇ ನೋಡಿ ಮೋದಿ ಆಡಳಿತದ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬ ವ್ಯಂಗ್ಯದೊಂದಿಗೆ ಪೋಸ್ಟ್ಅನ್ನಿ ಹಂಚಿಕೊಳ್ಳಲಾಗಿದೆ.
ಈ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಳ್ಳುತ್ತಿದ್ದಾರೆ, ಇದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೋಡಬಹುದು. ಹಾಗಿದ್ದರೆ ಪೊಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಅಯೋಧ್ಯ ರಾಮ ಮಂದಿರದ ಸಂಪರ್ಕ ರಸ್ತೆ ಮಳೆಗೆ ಕೊಚ್ಚಿಹೋಗಿದೆ ಎಂದು ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, 21 ಏಪ್ರಿಲ್, 2024 ರಂದು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ. “ದುಬೈನಲ್ಲಿ ಭಾರೀ ಮಳೆಯ ನಂತರ ರಸ್ತೆ ಹಾಳಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.
https://www.youtube.com/watch?v=5EapWxmOqmI
ಇದಲ್ಲದೆ, ಫೇಸ್ಬುಕ್ ಬಳಕೆದಾರರು ನವೆಂಬರ್ 18, 2023 ರಂದು ಜನರು ಮೊಣಕಾಲುದ್ದ ನೀರಿನಿಂದ ತುಂಬಿದ ಅಂಡರ್ಪಾಸ್ ಅನ್ನು ದಾಟುವ ವಿಡಿಯೊವನ್ನು ಅಪ್ಲೋಡ್ ಮಾಡಿದ್ದು ಇದು ದುಬೈನ ದೃಶ್ಯ ಎಂದು ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
कतिपय ट्विटर हैंडल एवं सोशल मीडिया पर प्रसारित असत्य खबर का #Ayodhyapolice खंडन करती है।
ट्वीट में दिखाया गया वीडियो अयोध्या का नहीं है। भ्रामक खबर फैलाने वाले व्यक्ति के विरुद्ध अभियोग पंजीकृत किया गया है। #UPPolice pic.twitter.com/A7sR7IAKtL— AYODHYA POLICE (@ayodhya_police) July 21, 2024
ಇದಲ್ಲದೆ, ವೈರಲ್ ವೀಡಿಯೊ ಅಯೋಧ್ಯೆಗೆ ಸಂಬಂಧಿಸಿದ್ದಲ್ಲ ಎಂದು ಹೇಳುವ ಅಯೋಧ್ಯಾ ಪೊಲೀಸರ ಟ್ವೀಟ್ ಲಭ್ಯವಾಗಿದೆ. ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪೊಲೀಸರು ಇಂತಹ ತಪ್ಪುದಾರಿಗೆಳೆಯುವ ಸುದ್ದಿಯನ್ನು ಹರಡುವ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ದುಬೈನಲ್ಲಿ ಕಳೆದ ಏಪ್ರಿಲ್ನಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳು ಕೊಚ್ಚಿಹೋದ ವಿಡಿಯೋವನ್ನು ಹಂಚಕೊಂಡು ಅಯೋಧ್ಯ ರಾಮ ಮಂದಿರದ ಮಾರ್ಗದ ರಸ್ತೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಕಲಿ ಲೋಕೋ-ಪೈಲಟ್ಗಳೊಂದಿಗೆ ಸಭೆ ನಡೆಸಿದ್ರಾ ರಾಹುಲ್ ಗಾಂಧಿ?