ಮೋದಿ, ಷಾ ವಿರುದ್ದ ಮಾತನಾಡುವವರಿಗೆ ಗೌರಿ ಲಂಕೇಶರಿಗೆ ಆದ ಗತಿಯೇ – ಶ್ರೀ
“ಮೋದಿ, ಅಮಿತ್ ಷಾ ವಿರುದ್ದ ಮಾತನಾಡುವವರಿಗೆ ಗೌರಿ ಲಂಕೇಶರಿಗೆ ಆದ ಗತಿಯಾಗುತ್ತದೆ” ಹೀಗೆ ಪ್ರಚೋದನಕಾರಿಯಾದ ಭಾಷಣ ಅಂದೋಲಾ ಶ್ರೀ ಮಾಡಿದ್ದಾರೆ.
ಫೆಬ್ರುವರಿ ೨ ರಂದು ನಡೆದ ರಾಯಚೂರಿನ ಶಕ್ತಿನಗರದ ಭಾರತ ಯುವ ವಿವೇಕ ಸಂಘದಿಂದ ಆಯೋಜಿಸಿದ್ದ ಧರ್ಮ ಸಮ್ಮೇಳನ ಭಾಷಣದ ತುಣುಕು ಈಗ ವೈರಲ್ ಆಗಿದೆ.
“ಇನ್ನೂ ೧೪-೧೫ ವಯಸ್ಸಿನವರು ಮೋದಿ ಅಮಿತ್ ಷಾ ಬಗ್ಗೆ ಮಾತನಾಡುತ್ತಾರೆ. ಭವಿಷ್ಯ ಅವರಿಗೂ ಗೌರಿ ಲಂಕೇಶರಿಗೆ ಆದ ಗತಿಯಾಗುತ್ತೆ” ಎಂದ ಸ್ವಾಮೀಜಿ ಹೇಳಿದ್ದಾರೆ.
ಈ ಸಮ್ಮೇಳನದಲ್ಲಿ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸಹ ಇದ್ದರು. ಭಾಷಣದ ವಿರುದ್ದ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ. ದೂರು ದಾಖಲಾದರೂ ತನಿಖೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.