ಮೋದಿ, ಷಾ ವಿರುದ್ದ ಮಾತನಾಡುವವರಿಗೆ ಗೌರಿ ಲಂಕೇಶರಿಗೆ ಆದ ಗತಿಯೇ – ಶ್ರೀ

“ಮೋದಿ, ಅಮಿತ್ ಷಾ ವಿರುದ್ದ ಮಾತನಾಡುವವರಿಗೆ ಗೌರಿ ಲಂಕೇಶರಿಗೆ ಆದ ಗತಿಯಾಗುತ್ತದೆ” ಹೀಗೆ ಪ್ರಚೋದನಕಾರಿಯಾದ ಭಾಷಣ ಅಂದೋಲಾ ಶ್ರೀ ಮಾಡಿದ್ದಾರೆ.

ಫೆಬ್ರುವರಿ ೨ ರಂದು ನಡೆದ ರಾಯಚೂರಿನ ಶಕ್ತಿನಗರದ ಭಾರತ ಯುವ ವಿವೇಕ ಸಂಘದಿಂದ ಆಯೋಜಿಸಿದ್ದ ಧರ್ಮ ಸಮ್ಮೇಳನ ಭಾಷಣದ ತುಣುಕು ಈಗ ವೈರಲ್ ಆಗಿದೆ.

“ಇನ್ನೂ ೧೪-೧೫ ವಯಸ್ಸಿನವರು ಮೋದಿ ಅಮಿತ್ ಷಾ ಬಗ್ಗೆ ಮಾತ‌ನಾಡುತ್ತಾರೆ. ಭವಿಷ್ಯ ಅವರಿಗೂ ಗೌರಿ ಲಂಕೇಶರಿಗೆ ಆದ ಗತಿಯಾಗುತ್ತೆ” ಎಂದ ಸ್ವಾಮೀಜಿ ಹೇಳಿದ್ದಾರೆ.

ಈ ಸಮ್ಮೇಳನದಲ್ಲಿ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸಹ ಇದ್ದರು. ಭಾಷಣದ ವಿರುದ್ದ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ. ದೂರು ದಾಖಲಾದರೂ ತನಿಖೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights