ಕೊವೀಡ್ ಪರಿಹಾರಕ್ಕಾಗಿ ತೀವ್ರಗೊಂಡ ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಹೋರಾಟ!

ಕೊವೀಡ್ ಪರಿಹಾರಕ್ಕಾಗಿ ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಹೋರಾಟ ತೀವ್ರ ಗೊಂಡಿದೆ.

ಎರಡನೆ‌ ಕೊವೀಡ್ ಅಲೆಗೆ ಸಿಲುಕಿನಿರುದ್ಯೋಗಿಗಳಾಗಿರುವ ರಾಜ್ಯದ ನೋಂದಾಯಿತ/ವಲಸೆ ಕಟ್ಟಡ ಕಾರ್ಮಿಕ ಕುಟುಂಬಗಳಿಗೆ  ಪ್ರತಿ ತಿಂಗಳಿಗೆ 10 ಸಾವಿರ ಸಹಾಯಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ನಿರ್ಮಾಣ ವಲಯದ ಕಾರ್ಮಿಕರು ಮೇ 15 ರಿಂದ ತೀವ್ರ ಹೋರಾಟ ನಡೆಸುತ್ತಿದ್ದಾರೆ.

ಮೇ15 ರಿಂದ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜನೆಗೊಂಡಿರುವ  ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸುಮಾರು ‌ಹತ್ತು ಸಾವಿರಕ್ಕೂ ಅಧಿಕ ನಿರ್ಮಾಣ ವಲಯದ ಕಾರ್ಮಿಕರು ತಮ್ಮ ಕುಟುಂಬ ಸಹಿತ ಮನೆ ಮನೆಗಳ ಮುಂದೆ ಭಿತ್ತಿಪತ್ರಗಳನ್ನು ಹಿಡಿದು ಯಶಸ್ವಿ ಪ್ರಚಾರ ನಡೆಸಿ ಸರ್ಕಾರದ ಗಮನ ಸೆಳೆದಿದ್ದಾರೆ.

ಇದೀಗ‌ ಮೇ 17 ರಿಂದ 21 ರವರೆಗೂ ಕಟ್ಟಡ ಕಾರ್ಮಿಕ ಹತ್ತು ಪ್ರಮುಖ ಬೇಡಿಕೆಗಳಿಗಾಗಿ ಅನ್ ಲೈನ್ ಪ್ರಚಾರ ಸಭೆಗಳನ್ನು ಹಮ್ಮಿಕೊಂಡು ಅದು‌ ಕೂಡ ಸಾವಿರಕ್ಕೂ ಕಾರ್ಮಿಕರನ್ನು ‌ಮತ್ತು ಸರಕಾರದ ಗಮನ ಸೆಳೆಯುತ್ತಿದೆ.‌ ಕಲ್ಯಾಣ ಮಂಡಳಿ ಮತ್ತು ಸರ್ಕಾರ ಕೂಡಲೆ‌ ಪರಿಹಾರ ಪ್ಯಾಕೇಜ್ ಘೋಷಿಸದಿದ್ದರೆ ಮೇ 21 ರಂದು ರಾಜ್ಯದ ಕಾರ್ಮಿಕ ನಿರೀಕ್ಷಕರ ಕಚೇರಿಗಳು ಮತ್ತು ಜಿಲ್ಲಾ ಕಾರ್ಮಿಕಾಧಿಕಾರಿಗಳ ಕಚೇರಿ ಹಾಗೂ ಬೆಂಗಳೂರಿನ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ‌ಮುಂದೆ ದೈಹಿಕ‌ ಅಂತರ ಕಾಪಾಡಿಕೊಂಡು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಪ್ರಮುಖ ಬೇಡಿಕೆಗಳು;

1.    ಕೂಡಲೇ ಮಂಡಳಿಯಲ್ಲಿ ನೋಂದಾಯಿತವಾದಎಲ್ಲಾ ಕಾರ್ಮಿಕರಿಗೂ ಕೊವೀಡ್ ಎರಡನೇ ‌ಅಲೆಯಪರಿಹಾರವೆಂದು ತಿಂಗಳಿಗೆ‌ ರೂ 10000 ( ಹತ್ತು ಸಾವಿರ) ಪರಿಹಾರ ಹಣವನ್ನು ಮುಂದಿನ ಕನಿಷ್ಟಮೂರು ತಿಂಗಳು ಹಾಲಿ ಮಂಡಳಿಯಲ್ಲಿ ನೋಂದಾವಣೆಯಾಗಿರುವ ಮತ್ತು ನೋಂದಾವಣೆಗಾಗಿ  ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿರುವ  ಎಲ್ಲ ಕಾರ್ಮಿಕರ ಬ್ಯಾಂಕ್ ‌ಖಾತೆಗೆ ಮೇ 1ರಿಂದಲೇ ಅನ್ವಯವಾಗುವಂತೆ ಹಣ ವರ್ಗಾವಣೆಮಾಡಬೇಕು

2.      ಕಳೆದ ವರ್ಷ ಘೋಷಿಸಲಾದ ಕೊವೀಡ್ ರೂ5000 ಪರಿಹಾರ ಹಣ ಬಾಕಿ ಇರುವ 1ಲಕ್ಷ ಕಾರ್ಮಿಕರಿಗೆ ಕೂಡಲೇ ಹಣ ವರ್ಗಾವಣೆಮಾಡಬೇಕು

3.  ಕೊವೀಡ್ ಸಮಯದಲ್ಲಿ ಶೈಕ್ಷಣಿಕ ಮತ್ತುಪಿಂಚಣಿ, ಮದುವೆ ವೈದ್ಯಕೀಯ ‌ ಮೊದಲಾದ  ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಮೇ 30 ರವರೆಗೆವಿಸ್ತರಿಸಲಾದ ಅವಧಿಯನ್ನು ಮುಂದಿನ ಮೂರುತಿಂಗಳವರೆಗೆ ವಿಸ್ತರಿಸಿ ಆದೇಶ‌ ಮಾಡಬೇಕು

4.      ಅರ್ಜಿ ಸಲ್ಲಿಸಿ ಇತ್ಯರ್ಥವಾಗದೇ ಉಳಿದಿರುವಎಲ್ಲಾ ಫಲಾನುಭವಿಗಳ ಸೌಲಭ್ಯಗಳಅರ್ಜಿಗಳನ್ನು‌ಕೂಡಲೇ ಇತ್ಯರ್ಥಪಡಿಸಿ‌ ಅವರ‌ ಖಾತೆಗೆಹಣ ಜಮಾ‌ ಮಾಡಬೇಕು

5.      ಎರಡನೇ ಕೊವೀಡ್ ಅಲೆಯಿಂದ ಮತ್ತೆಸಂಕಷ್ಟಕ್ಕೆ ಸಿಲುಕಿರುವ ಅಂತರ ರಾಜ್ಯ ಮತ್ತು‌ ಅಂತರಜಿಲ್ಲೆಗಳ ಬಹುತೇಕ ಎಲ್ಲ ವಲಸೆ  ಕಾರ್ಮಿಕರು ಈಗಾಗಲೇ ಜೀವ ಭಯದಿಂದ ಬೆಂಗಳೂರು ಮತ್ತು ಕರ್ನಾಟಕವನ್ನು ತೊರೆದು ಹೋಗಿದ್ದಾರೆ.  ಆದಾಗ್ಯೂ ಇನ್ನೂ ಯಾರಾದರೂ ಇಲ್ಲಿ ಉಳಿದಿದ್ದರೆ  ಅಂತಹ ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ ಉಚಿತ ಊಟ,ವಸತಿ‌ ಮತ್ತು ಅವರು ತಮ್ಮ ಊರುಗಳಿಗೆತೆರಳಲು ಬಯಸಿದರೆ ಅಂತಹವರಿಗೆ ಉಚಿತ ಸಾರಿಗೆಸೌಲಭ್ಯಗಳನ್ನು ಒದಗಿಸಲು ರಾಜ್ಯದ ಬಿಲ್ಡರ್ಅಸೋಸಿಯೇಷನ್ (ಕ್ರೇಡಾಯಿ) ಅವರ ಜೊತೆಮಾತುಕತೆ ನಡೆಸಿ ವ್ಯವಸ್ಥೆ ಮಾಡಬೇಕು.

6.    ಕಲ್ಯಾಣ ಮಂಡಳಿಯು ವಲಸೆ ಕಾರ್ಮಿಕರಿಗೆ ರೇಷನ್ ಕಿಟ್ ನೀಡಲು ಉದ್ದೇಶಿಸಿದ್ದು ಅದಕ್ಕಾಗಿ ಅವರ ಮಾಹಿತಿಯನ್ನು ಕಾರ್ಮಿಕರ ನಿರೀಕ್ಷಕರ ಮೂಲಕ ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ. ಕೊವೀಡ್ 19  2 ನೇ ಅಲೆಯು ತೀವ್ರ ಸಾವು ನೋವುಗಳನ್ನು ಉಂಟು ಮಾಡುತ್ತಿದೆ. ಈ ಸೋಂಕು ಇದೀಗ ಸಂಪೂರ್ಣ ನಗರ-ಹಳ್ಳಿ ಎನ್ನುವ ವ್ಯತ್ಯಾಸವಿಲ್ಲದೆ ಲಕ್ಷಾಂತರ ಜನರಿಗೆ ವ್ಯಾಪಕವಾಗಿ ಹರಡುತ್ತಿದೆ. ಜೊತೆಗೆ ಮಂಡಳಿಯ ಮತ್ತು ಕಾರ್ಮಿಕ ಇಲಾಖೆಯ  ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾರ್ಮಿಕ ಸಂಘಗಳ ನಾಯಕರುಗಳು ಕೂಡ ಸೋಂಕಿಗೆ ಒಳಗಾಗಿ ಮನೆಗಳಲ್ಲಿದ್ದಾರೆ. ಇಂತಹ ಕಷ್ಟದ ಸನ್ನಿವೇಶದಲ್ಲಿ ಮಂಡಳಿಯು ಈ ರೀತಿ ರೇಷನ್ ಕಿಟ್ ಗಳನ್ನು ವಿತರಣೆ ಮಾಡುವುದು ಅತ್ಯಂತ ಅಪಾಯಕಾರಿಯಾದುದ್ದು  ಇದು ಮಂಡಳಿ, ಕಾರ್ಮಿಕ ಇಳಾಖೆ  ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾರ್ಮಿಕ ಸಂಘಗಳ ನಾಯಕರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಮತ್ತಷ್ಟು ಸಾವು ನೋವುಗಳಿಗೆ ಕಾರಣವಾಗಬಹುದು  ಆದ್ದರಿಂದ ಪ್ರಸಕ್ತ  ಸನ್ನಿವೇಶದಲ್ಲಿ ಈ ಪ್ರಕ್ರಿಯನ್ನು ಕೂಡಲೇ ನಿಲ್ಲಿಸಬೇಕು ಬದಲಾಗಿ ಅಂತಹ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡಬೇಕು ಎನ್ನುವುದು ನಮ್ಮ ಆಗ್ರಹ ಪೂರ್ವಕ ಕೋರಿಕೆಯಾಗಿದೆ.

7.      ಕೋವಿಡ್ ಎರಡನೇ ಅಲೆಯು ತೀವ್ರ ಸ್ವರೂಪ ಪಡೆದುಕೊಂಡಿದೆ ಮತ್ತು ಮೂರನೇ ಮತ್ತು ನಾಲ್ಕನೇ ಅಲೆಯು ಇದೇ ಅಕ್ಟೋಬರ್ ತಿಂಗಳಿಂದ ತೀವ್ರಗೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಉಚಿತವಾದ ಲಸಿಕೆಯನ್ನು ಒಂದು ಕಾಲ ಮಿತಿಯಲ್ಲಿ ಹಾಕಲು ಕ್ರಮವಹಿಸಬೇಕು.

8.      ಕೋವಿಡ್ 19 ರ ಸೋಂಕಿನಿಂದ ಮೃತಪಡುವ ನೋಂದಾಯಿತ ಪ್ರತಿ ಕಟ್ಟಡ ಕಾರ್ಮಿಕ  ಅಥವಾ ಸಾವಿಗೀಡಾಗುವ ಕುಟುಂಬದ ಸದಸ್ಯರಿಗೆ ಕನಿಷ್ಟ 10 ಲಕ್ಷ  ರೂ ಗಳ ವಿಶೇಷ ಪರಿಹಾರ ಧನವನ್ನು ಪ್ರಕಟಿಸಬೇಕು. ನೋಂದಾಯಿತ ರಲ್ಲದ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕನಿಷ್ಟ 5 ಲಕ್ಷ ಪರಿಹಾರ ನೀಡಬೇಕು ಮತ್ತು ಕೋವೀಡ್ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ಕಟ್ಡಡ ಕಾರ್ಮಿಕರ ಮತ್ತು ಅವರ ಕುಟುಂಬದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಮಂಡಳಿಯೇ ಭರಿಸಬೇಕು

9.      ಕೊವೀಡ್ ಎರಡನೆ ಅಲೆ‌ ವ್ಯಾಪಕವಾಗಿದೆ.ಇದರಿಂದ ಕಟ್ಟಡ ನಿರ್ಮಾಣ ವಲಯ ಮತ್ತು ಅಲ್ಲಿ ಕೆಲಸ ಮಾಡುವ ಲಕ್ಷಾಂತರ  ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಕಲ್ಯಾಣ ಮಂಡಳಿ ಸಭೆ ಮತ್ತು  ‌ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ  ಸಮನ್ವಯಸಮಿತಿ ನಾಯಕರ ಆನ್ ಲೈನ್  ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ   ಕೂಡಲೇ ಕರೆದು ಚರ್ಚಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಪರವಾಗಿ  ಪರವಾಗಿಕೋರುತ್ತೇವೆ.

10.ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ವಿತರಿಸಲಾದ ರೇಷನ್ ಕಿಟ್ ಗಳು ನೈಜ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ ದೊರೆಯದಿರುವ ಬಗ್ಗೆ ನಾವು ಹಿಂದಯೇ ದೂರುಗಳನ್ನು ನೀಡಿದ್ದೇವು ಅಲ್ಲದೆ ವಿತರಣೆ ಮಾಡಿದ್ದು ಕಳಪೆ ಪದಾರ್ಥಗಳಿಂದ ಕೂಡಿದ್ದವು ಮತ್ತು ಟೂಲ್ ಕಿಟ್ ವಿತರಣೆ‌ಯು ಕಳಪೆ ಗುಣಮಟ್ಟದಿಂದ ಕೂಡಿದ್ದ ಬಳಕೆಗೆ ಯೋಗ್ಯವಾಗಿಲ್ಲ. ಈ ಎಲ್ಲ ಖರೀದಿಗಳಲ್ಲಿ ಸಾಕಷ್ಟು ಅವ್ಯವಹಾರ ನಡೆಸಿರುವ ಬಗ್ಗೆ ಅನುಮಾನಗಳಿವೆ ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ನಾವು ಆಗ್ರಹಿಸುತ್ತೇವೆ. ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಕಲ್ಯಾಣ ಮಂಡಳಿ ವಸ್ತುಗಳ ರೂಪದಲ್ಲಿ ವಿತರಣೆ ಮಾಡುವುದನ್ನು ನಿರ್ಬಂಧಿಸಿದ್ದರೂ ಮಂಡಳಿಯು ಟೂಲ್ ಕಿಟ್ ಗಳ ವಿತರಣೆಗೆ ಟೆಂಡರ್ ಕರೆದಿರುವುದು ಸರಿಯಲ್ಲ ಈ ಬಗ್ಗೆ ನಾವು ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದರೂ‌ಈ ಬಗ್ಗೆ ಕ್ರಮವಹಿಸದಿರುವುದು ಉತ್ತಮ ನಡೆಯಲ್ಲ ಕೂಡಲೇ ಅ ಪ್ರಕ್ರಿಯೆ ನಿಲ್ಲಿಸಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights