ಆದಿ ಚುಂಚನಗಿರಿಯಲ್ಲಿ ಸಿ.ಎಂ. ಬಿಎಸ್ವೈ ಕಾಲಿಗೆ ಬಿದ್ದ ಜೆಡಿಎಸ್ ಶಾಸಕ….
ಮಂಡ್ಯದ ನಾಗಮಂಗಲದ ಆದಿ ಚುಂಚನಗಿರಿಯಲ್ಲಿ ಜೆಡಿಎಸ್ ಶಾಸಕ ಸಿ.ಎಂ. ಬಿಎಸ್ವೈ ಕಾಲಿಗೆ ಬಿದ್ದ ಘಟನೆ ನಡೆದಿದೆ.
ಶ್ರೀಮಠಕ್ಕೆ ಬಂದ ಸಿ.ಎಂ.ಗೆ ಸನ್ಮಾನಿಸಿದ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಶ್ರೀಮಠದಲ್ಲಿ ಸಿ.ಎಂ. ಜೊತೆ ಕಾಣಿಸಿಕೊಂಡ ಜೆಡಿಎಸ್ ಶಾಸಕನ ನಡೆ ಅಚ್ಚರಿ ಮೂಡಿಸಿದೆ.
ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಸ್ಥಿರವಾಗ್ತಿದ್ದಂತೆ ಬದಲಾಯ್ತಾ ಜೆಡಿಎಸ್ ಶಾಸಕನ ಸ್ವಾಮಿ ನಿಷ್ಠೆ? ಎನ್ನುವ ಪ್ರಶ್ನೆ ಸದ್ಯ ಮೂಡಿದೆ. ಮೈತ್ರಿ ಸರ್ಕಾರ ಬಿದ್ದ ಬಳಿಕ ಯಾವ ಶಾಸಕರು ಬಿಎಸ್ ವೈ ಸರ್ಕಾರ ಸೇರ್ತಾರೆ ಅನ್ನೋ ಆತಂಕದಿಂದ ಬಿಎಸ್ ವೈ ಯತ್ತ ಯಾರೇ ಕಣ್ನಾಯಿಸಿದರೂ ಅನುಮಾನ ಬಾರದೇ ಇರದು. ಒಟ್ಟಿನಲ್ಲಿ ಜೆಡಿಎಸ್ ಶಾಸಕರ ಈ ನಡೆ ಅನುಮಾನ ಸೃಷ್ಟಿಸಿದ್ದು ಸುಳ್ಳಲ್ಲ.