ರೈತನ ಮೇಲೆ ಆನೆ ದಾಳಿ : ರಸ್ತೆಯಲ್ಲಿ ಮರದ ದಿಮ್ಮಿ ಸುಟ್ಟು ಆಕ್ರೋಶ
ಬೆಳಗ್ಗೆ ಬಾಳೆ ತೋಟಕ್ಕೆ ಹೋಗಿದ್ದ ವೇಳೆ ರೈತನ ಮೇಲೆ ಆನೆ ದಾಳಿ ಮಾಡಿದ ಘಟನೆ ಮೈಸೂರಿನ ಹುಣಸೂರಿನ ಗುರುಪುರ ಗ್ರಾಮದಲ್ಲಿ ನಡೆದಿದೆ.
ಆನೆ ದಾಳಿಗೊಳಗಾದವರು ಗುರುಪುರದ ರಾಘವೇಂದ್ರ. ಆನೆ ದಾಳಿಯಿಂದ ರಾಘವೇಂದ್ರ ಗಂಭೀರ ಗಾಯಗೊಂಡಿದ್ದು, ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಆನೆ ಕಾಟದಿಂದ ಹೈರಾಣಾದ ಗುರುಪುರ ಗ್ರಾಮಸ್ಥರು, ರಸ್ತೆ ತಡೆದು ಪ್ರತಿಭಟನೆ ನಡೆಸ್ತಿದ್ದಾರೆ. ಆನೆ ಉಪಟಳದಿಂದ ಮುಕ್ತಿ ಕೊಡಿಸುವಂತೆ ಆಗ್ರಹಿಸಿ ರಸ್ತೆಯಲ್ಲಿ ಮರದ ದಿಮ್ಮಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಂತೆ ಒತ್ತಾಯ ಮಾಡಿದ್ದಾರೆ.