ಕರುನಾಡಿಗೆ ಕೊರೊನಾಘಾತ : ಹೊಸದಾಗಿ 178 ಪ್ರಕರಣ ಪತ್ತೆ- ಸೋಂಕಿತರ ಸಂಖ್ಯೆ 2711ಕ್ಕೇರಿಕೆ!

ರಾಜ್ಯದಲ್ಲಿ ಕೊರೊನಾ ಅಟ್ಟ ಹಾಸ ಮುಂದುವರೆದಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು 178 ಕೇಸ್ ದಾಖಲಾಗಿದ್ದು ಅಘಾತವನ್ನುಂಟು ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು  2711 ಕೇಸ್ ದಾಖಲಾಗಿವೆ.

ಹೌದು…ಕರುನಾಡಿಗೆ ಅನ್ಯ ರಾಜ್ಯಗಳ ಕಂಟಕ ಶುರುವಾಗಿದ್ದು ಮಹಾರಾಷ್ಟ್ರ ಹಾಗೂ ಮುಂಬೈಯಿಂದ ಬಂದವರಲ್ಲಿ ಇಂದು ಹೆಚ್ಚು ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇಂದು ದಾಖಲಾದ 178 ಕೇಸ್ ಗಳಲ್ಲಿ 154 ಜನರಿಗೆ ಮಹಾರಾಷ್ಟ್ರ ಲಿಂಕ್ ಇದೆ. ಇವತ್ತು 15 ವರ್ಷದ ಒಳಗಿನ ಒಟ್ಟು 35 ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಇಂದು ಬೆಳಗ್ಗೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಲ್ಲಿ 178 ಮಂದಿಗೆ ಸೋಂಕು ದೃಢವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಬೆಂಗಳೂರು 10, ಬೆಂಗಳೂರು ಗ್ರಾಮಾಂತರ 1, ಯಾದಗಿರಿ 60, ರಾಯಚೂರು 62, ಕಲಬುರಗಿ 15, ಚಿಕ್ಕಬಳ್ಳಾಪುರ 4, ಉಡುಪಿ 15, ಮಂಡ್ಯ 2, ಮೈಸೂರು 2, ದಾವಣಗೆರೆ 4, ಶಿವಮೊಗ್ಗ 1, ಚಿತ್ರದುರ್ಗ 1 ಮತ್ತು ಧಾರವಾಡ 1 ಹೊಸ ಪ್ರಕರಣಗಳು ದಾಖಲಾಗಿದೆ.

ರಾಜ್ಯದಲ್ಲಿ ಒಟ್ಟು  2711 ಕೇಸ್ ದಾಖಲಾಗಿಗಿದ್ದು, ಇವರಲ್ಲಿ 47 ಜನ ಸಾವನ್ನಪ್ಪಿದ್ದಾರೆ. ಇಂದು ಒಟ್ಟು 35 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 869 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights