ವರದಕ್ಷಿಣೆಗಾಗಿ ಸೀಮೆಎಣ್ಣೆ ಸುರಿದು ಸುಟ್ಟರಾಪಾಪಿಗಳು? : ಕೊಪ್ಪಳದಲ್ಲೊಂದು ಅಮಾನವೀಯ ಘಟನೆ
ದೇಶದಲ್ಲಿ ಲಾಕ್ ಡೌನ್ ಜಾರಿಯಾದಾಗಿನಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಗಾಳಿ, ನೀರು ಶುದ್ಧಗೊಳ್ಳುತ್ತಿದೆ. ಮದ್ಯವ್ಯವಸನಿಗಳು ಮದ್ಯಸೇವನೆಯಿಂದ ದೂರ ಉಳಿದಿದ್ದಾರೆ. ಒಂದು ದಿನ ರಜೆ ಇಲ್ಲದೇ ಕೆಲಸ ಮಾಡುವ ಜನ ತಮ್ಮ ತಮ್ಮ ಮನೆಗಳಲ್ಲಿ ಇದ್ದುಕೊಂಡು ಕುಟುಂಬಸ್ಥರಿಗೆ ಸಮಯ ನೀಡುತ್ತಿದ್ದಾರೆ. ಈ ಮದ್ಯ ಕೊಪ್ಪಳದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ.
ಹೌದು… ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದ ಗಂಡನ ಮನೆಯವರು ಸೀಮೆಎಣ್ಣೆ ಸುರಿದು ವಿವಾಹಿತೆಯನ್ನು ಸುಟ್ಟು ಹಾಕಿದ ಘಟನೆ ಕೋಲಾರದ ಹಿರೇನಂದಿಹಾಳ ಗ್ರಾಮದಲ್ಲಿ ನಡೆದಿದೆ.
ನಿಂಗಮ್ಮ (20 ವರ್ಷ) ಕೊಲೆಯಾದ ದುರ್ದೈವಿ. ಮದುವೆಯ ಸಂದರ್ಭದಲ್ಲಿ ನಿಂಗಮ್ಮನ ತಂದೆ ವರದಕ್ಷಿಣೆ ನೀಡಿ ಮದುವೆ ಮಾಡಿದ್ದರು. ಆದರೂ ವರದಕ್ಷಿಣೆ ತರುವಂತೆ ಗಂಡನ ಮನೆಯವರು ನಿಂಗಮ್ಮನಿಗೆ ಕಿರುಕುಳ ನೀಡುತ್ತಲೇ ಇದ್ದರು. ವರದಕ್ಷಿಣೆಗಾಗಿ ಮಗಳನ್ನು ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ್ದಾರೆ ಎಂದು ಸಂಗನಗೌಡ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಮಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಂಡನ ಮನೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.