ಅಮೂಲ್ಯ, ಆರ್ದ್ರಾ ದೇಶದ್ರೋಹಿ ಪ್ರಕರಣ : ಇದೆಲ್ಲ ತುಕುಡೆ ಗ್ಯಾಂಗ್ ಗಳ ಕೆಲಸ!-ಸಿಟಿ ರವಿ
ದೇಶದ್ರೋಹದ ಚಟುವಟಿಕೆಗಳಿಗೆ ಕ್ಷಮೆ ಇರಬಾರದು. ಅವರ ಬಗ್ಗೆ ಸಿಂಪತಿಯೂ ಇರಬಾರದು? ಯಾರು ಕೂಡ ವಕಾಲತ್ತು ವಹಿಸಬಾರದು? ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗೋದು ದೇಶಭಕ್ತಿನಾ? ಫ್ರೀ ಕಾಶ್ಮೀರ ಅಂತ ಕೂಗೋದು ದೇಶಭಕ್ತಿನಾ? ಅಸ್ಸಾಂ ರಾಜ್ಯವನ್ನು ತುಂಡರಿಸುವುದು ದೇಶಭಕ್ತಿನಾ? ಇದೆಲ್ಲ ತುಕುಡೆ ಗ್ಯಾಂಗ್ ಗಳ ಕೆಲಸ! ಎಂದು ಅಮೂಲ್ಯ, ಆರ್ದ್ರಾ ದೇಶದ್ರೋಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸಚಿವ ಸಿಟಿ ರವಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತುಕಡಿ ಗ್ಯಾಂಗ್ ಗಳ ಯೋಜನೆಯ ಪ್ರಕಾರ ಅವರೆಲ್ಲಾ ಮಾತನಾಡುತ್ತಿದ್ದಾರೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟು ಮಾಡುವುದು. ಪಾಕಿಸ್ತಾನಕ್ಕೆ ಖುಷಿಪಡಿಸುವ ಕೆಲಸ ಮಾಡ್ತಿದ್ದಾರೆ. ಪಾಕಿಸ್ತಾನಕ್ಕೆ ಖುಷಿಪಡಿಸೋರಿಗೆ ಪಡಿಸುವ ಕೆಲಸ ಮಾಡುವವರಿಗೆ. ನಮ್ಮ ದೇಶದಲ್ಲಿ ಏಕೆ ಅನ್ನ ಹಾಕಬೇಕು. ಅಂತವರನ್ನು ಪಾಕಿಸ್ತಾನಕ್ಕೆ ಕಳಿಸೋಣ. ಇಲ್ಲಿ ಮುಖ ತೋರಿಸಲು ಅವಕಾಶವಿದೆ. ಪಾಕಿಸ್ತಾನದಲ್ಲಿ ಮುಖ ತೋರಿಸಲು ಅವಕಾಶವಿಲ್ಲ ಎಂದಿದ್ದಾರೆ.
ಪೌರತ್ವ ಕಾಯ್ದೆ ದೇಶದ ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಆದರೂ ಚಳುವಳಿ ಯಾಕೆ ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ. ಇದು ದೇಶ ಒಡೆಯುವ ಸಂಚಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ದೇಶವನ್ನು ತುಂಡರಿಸುವುದು ದೇಶ ದ್ರೋಹಿಗಳ ಕೆಲಸ. ದೇಶದ್ರೋಹಿಗಳು ಸಂಚಿನ ಭಾಗವಾಗಿ ಬಳಸಿಕೊಳ್ಳುತ್ತಿದ್ದಾರೆ. ದೇಶದ ಪ್ರಧಾನಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರ ವಿರುದ್ಧ ಧಿಕ್ಕಾರ ಕೂಗುತ್ತಾರೆ. ಇದು ಅವರದ್ದು ದುರುದ್ದೇಶದ ಹೋರಾಟ. ದುರುದ್ದೇಶದ ಹೋರಾಟದ ವಿರುದ್ಧ ಜನ ಬೀದಿಗಿಳಿಯಬೇಕು.