ಆಪರೇಷನ್ ಕಮಲಕ್ಕೆ ಶ್ರೀನಿವಾಸಗೌಡ ೫ ಕೋಟಿ ಪಡೆದಿದ್ದು ನಿಜ – ವರ್ತೂರು ಪ್ರಕಾಶ್ ವಾಗ್ದಾಳಿ
ಆಪರೇಷನ್ ಕಮಲಕ್ಕೆ ಶ್ರೀನಿವಾಸಗೌಡ ೫ ಕೋಟಿ ಪಡೆದಿದ್ದು ನಿಜ ಎಂದು ಶಾಸಕ ಶ್ರೀನಿವಾಸಗೌಡ ವಿರುದ್ದ ಕೋಲಾರದ ಪತ್ರಕರ್ತರ ಭವನದಲ್ಲಿ ವರ್ತೂರು ಪ್ರಕಾಶ್ ವಾಗ್ದಾಳಿ ಮಾಡಿದ್ದಾರೆ.
೫ ಕೋಟಿ ಹಣ ಪಡೆದು ೪.೫೦ ಲಕ್ಷ ಹಣ ವಾಪಾಸ್ ಕೊಟ್ಟಿದ್ದಾರೆ, ೫೦ ಲಕ್ಷ ಹಣ ಎಗರಿಸಿದ್ದಾರೆ. ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮೇಲೆ ಮಾಜಿ ಶಾಸಕ ಗಂಭೀರ ಆರೋಪ ಹೊರಿಸಿದ್ದಾರೆ.
ಹಾಲಿ ಶಾಸಕ ಶ್ರೀನಿವಾಸಗೌಡ ನಾನು ತಂದ ಅನುದಾನಗಳಿಗೆ ಪೂಜೆ ಮಾಡ್ತಿದ್ದಾರೆ. ನನ್ನ ಮಕ್ಕಳಿಗೆ ಶ್ರೀನಿವಾಸಗೌಡರು ಹೆಸರಿಡುವುದನ್ನು ನಿಲ್ಲಿಸಬೇಕು. ನನ್ನ ಕಾಲದಲ್ಲಿ ತಂದ ಅನುದಾನಗಳಲ್ಲಿ ಕೋಟ್ಯಾಂತರ ರೂಪಾಯಿ ಕಮಿಷನ್ ಪಡೆದು ಬೇರೆ ಕ್ಷೇತ್ರಕ್ಕೆ ನೀಡಿದ್ದಾರೆ. ಶಾಸಕರು ಇಂತಹ ನಡವಳಿಕೆಯನ್ನು ಬಿಡಬೇಕೆಂದು ಆಗ್ರಹಿಸಿದ್ದಾರೆ.
ಕೋಲಾರ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಶಾಸಕರು ಸಾದನೆ ಶೂನ್ಯ. ಬಿಜೆಪಿಯಿಂದ ಆಪರೇಶನ್ ಕಮಲಕ್ಕೆ ನೀಡಿದ್ದ ೫ ಕೋಟಿ ಹಣ ಪಡೆದು, ೪ ಕೋಟಿ ೫೦ ಲಕ್ಷ ಹಣ ವಾಪಾಸ್ ಮಾಡಿದ್ದಾರೆ. ಮಿಕ್ಕ ೫೦ ಲಕ್ಷ ಹಣ ಎಗರಿಸಿ ವಾಪಾಸ್ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.