ಕನಕಪುರ ಬಂಡೆಗೆ ಬಿಗ್ ರಿಲೀಫ್ : ಡಿಕೆಶಿಗೆ ಷರತ್ತುಬದ್ಧ ಜಾಮೀನು…

ಕನಕಪುರ ಬಂಡೆಗೆ ಬಿಗ್ ರಿಲೀಫ್ ಸಿಕ್ಕಿದ್ದು ಬಹುದಿನಗಳ ಪ್ರಯತ್ನದ ನಂತರ ಅನಾರೋಗ್ಯದ ಹಿನ್ನಲೆಯಲ್ಲಿ ಡಿಕೆಶಿಗೆ ಷರತ್ತುಬದ್ಧ ಜಾಮೀನನ್ನು ದೆಹಲಿ ಹೈಕೋರ್ಟ್ ನೀಡಿದೆ.

ಅಕ್ರಮ ಹಣ ಸಂಗ್ರಹ ವಿಚಾರಕ್ಕೆ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಇಂದು ಜಾಮೀನು ಮಂಜೂರಾಗಿದೆ. ಇದರಿಂದ ಕೋರ್ಟ್ ಆವರಣದಲ್ಲಿ ಡಿ.ಕೆ ಸುರೇಶ್ ಭಾವನಾತ್ಮಕ ಕಣ್ಣೀರು ಹಾಕಿದ್ದಾರೆ.

ಸುಮಾರು 28 ದಿನಗಳಿಂದ ತಿಹಾರ ಜೈಲು ವಾಸ ಅನುಭವಿಸಿದ ಡಿಕೆಶಿಗೆ ಇಂದು ಜೈಲಿನ ವಾಸ ಅಂತ್ಯವಾಗಿದೆ. 25 ಲಕ್ಷ ರೂಪಾಯಿಯ ಎರಡು ಬಾಂಡ್,  ಇಬ್ಬರ ಶ್ಯೂರಿಟಿ ಪಡೆದ ಹೈಕೋರ್ಟ್ 3 ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಿದೆ. 1) ಪಾಸ್ ಪೋರ್ಟ್ ಸೆರೆಂಡರ್ ಮಾಡಬೇಕು.  2) ವಿಚಾರಣೆಗೆ ಹಾಜರಾಗಬೇಕು. 3) ವಿದೇಶಕ್ಕೆ ಹೋಗಲು ಕೋರ್ಟ್ ಒಪ್ಪಿಗೆ ಪಡೆಯಬೇಕು. ಈ ಷರತ್ತುಗಳನ್ನ ಡಿಕೆಶಿ ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಸಹೋದರ ಡಿ.ಕೆ ಸುರೇಶ್ ಹೈಕೋರ್ಟ್ ಆವರಣದಲ್ಲಿ ವಕೀಲರನ್ನು ಅಪ್ಪಿಕೊಂಡು ಸಂತಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಡಿಕೆ ಸುರೇಶ್, ರಾಜ್ಯದ ಜನರ ಆಶೀರ್ವಾದ, ನಂಬಿದ ದೇವರು ಕೈ ಹಿಡಿದ್ರಿಂದ ಡಿಕೆ ಶಿವಕುಮಾರ್ ಗೆ ಬೇಲ್ ಸಿಕ್ಕಿದೆ ಎಂದು ಹೇಳಿದರು.

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights