ಕೋಲಾರ ತಹಶಿಲ್ದಾರ್ ಶೋಬಿತಾ ಬಂಧನಕ್ಕೆ ನ್ಯಾಯಾಲಯ ಆದೇಶ…!
ಕರ್ನಾಟಕ ಭೂ ಕಬಳಿಕೆ ನಿಷೇಧದಡಿ ವಿಶೇಷ ನ್ಯಾಯಾಲಯದಿಂದ ಕೋಲಾರ ತಹಶಿಲ್ದಾರ್ ಶೋಬಿತಾ ಬಂಧನಕ್ಕೆ ಆದೇಶ ಹೊರಡಿಸಲಾಗಿದೆ.
ಹೌದು… ಕೋಲಾರದ ಕೆಂದಟ್ಟಿ ಗ್ರಾಮದಲ್ಲಿ ಎದುರುದಾರರು ಜಮೀನು ಒತ್ತುವರಿ ಮಾಡಿರೊ ಬಗ್ಗೆ ವರದಿ ನೀಡಲು ಸೂಚಿಸಿದ್ದ ನ್ಯಾಯಾಲಯ, ವರದಿ ನೀಡಲು ಕಾಲಾವಕಾಶ ನೀಡಿದ್ದರು ನಿರ್ಲಕ್ಷ್ಯ ಹಿನ್ನಲೆ ದಸ್ತಗಿರಿ ಮಾಡಲು ಆದೇಶ ಹೊರಡಿಸಿದೆ.
ನವೆಂಬರ್ ೨೯.೧೧.೨೦೧೯ ರಂದು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಮಾಡಲು ಸೂಚನೆ ನೀಡಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಕೋಲಾರ ನಗರ ಠಾಣೆ ಪೊಲೀಸರಿಗೆ ಸೂಚಿಸಿದೆ.