ತಂಗಡಗಿ, ರಾಯರಡ್ಡಿ ಮಿಂಚಿಂಗ್ ಸ್ಟಾರ್ಸ್ – ಸಂಸದ ಸಂಗಣ್ಣ ಕರಡಿ ಆರೋಪ

ತಂಗಡಗಿ, ರಾಯರಡ್ಡಿ ಇಬ್ಬರು ಮಿಂಚಿಂಗ್ ಸ್ಟಾರ್ಸ್ ಎಂದು ಕೊಪ್ಪಳದ ನವಲಿಯಲ್ಲಿ ಸಂಸದ ಕರಡಿ ಸಂಗಣ್ಣ ಆರೋಪ ಮಾಡಿದ್ದಾರೆ.

ಸದಾ ಬೆಂಗಳೂರಿನಲ್ಲೇ ಇರೊ ಇವ್ರು ಅಪರೂಪಕ್ಕೆ ಕ್ಷೇತ್ರದ ಕಡೆಗೆ ಮುಖ ಮಾಡ್ತಾರೆ. ಕ್ಷೇತ್ರಕ್ಕೆ ಬಂದ್ರೆ ಜನರ ಸಮಸ್ಯೆ ಕೇಳೋದನ್ನ ಬಿಟ್ಟು ಮಾಧ್ಯಮದವರ ಎದುರು ಅಡ್ಡಾದಿಡ್ಡಿ ಮಾತಾಡಿ ಮಿಂಚ್ತಾರೆ. ಏನಾದರೂ ಮಾತಾಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸೊ ಮಿಂಚಿಂಗ್ ಸ್ಟಾರ್ಸ್ ಇವ್ರು ಎಂದು ಕರಡಿ ಸಂಗಣ್ಣ ಆರೋಪ ಮಾಡಿದ್ದಾರೆ.

ನವಲಿಯಿಂದ ಕಾರಟಗಿಗೆ ಮಹಾತ್ಮ ಗಾಂಧಿ ಸಂಕಲ್ಪ ಪಾದಯಾತ್ರೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಗಣ್ಣ, ಈ ಭಾಗದಲ್ಲಿ ಸಮಾಂತರ ಜಲಾಶಯ ನಿರ್ಮಾಣ ಅಗತ್ಯವಿದೆ. ಅದಕ್ಕಿರುವ ಸಮಸ್ಯೆ ತಿಳಿಯಲು ಜನಾಭಿಪ್ರಾಯ ಸಂಗ್ರಹಿಸಲು ಈ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ತಂಗಡಗಿ ಸೋತಿದ್ದಾರೆ. ಮಾಡೋಕೆ ಕೆಲಸ ಇಲ್ಲ.

ಅದಕ್ಕೆ ಆವಾಗಾವಾಗ ಮಾಧ್ಯಮದೆದುರು ಷೋ ಮಾಡ್ತಾರೆ ಎಂದು ಸಂಸದ ಸಂಗಣ್ಣ ಕರಡಿ ಆರೋಪ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights