ದಿನಸಿ ತರಲು ಹೋಗಿ ದಿಢೀರನೇ ಮದುವೆಯಾದ ಮಗನನ್ನು ನೋಡಿ ತಾಯಿ ಶಾಕ್….!
ದಿನಸಿ ತೆಗೆದುಕೊಂಡು ಬಾರೋ ಮಗನೇ ಅಂದ್ರೆ ಹೆಂಡತಿಯನ್ನು ಕರೆದುಕೊಂಡು ಬಂದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
26 ವರ್ಷದ ಗುಡ್ಡು ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ದಿಢೀರನೇ ಮದುವೆಯಾದ ಮಗನನ್ನು ನೋಡಿ ತಾಯಿ ಆಘಾತಗೊಂಡಿದ್ದು, ಈ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ಬರನ್ನು ಮನೆಗೆ ಸೇರಿಸಲಿಲ್ಲ. ಅಲ್ಲದೇ ತಾಯಿ ತನ್ನ ಮಗನ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಾನು ಮನೆಗೆ ದಿನಸಿ ಸಾಮಗ್ರಿಗಳನ್ನು ತರಲು ಮಗನನ್ನು ಹೊರಗೆ ಕಳುಹಿಸಿದ್ದೆ. ಆದರೆ ಸ್ವಲ್ಪ ಸಮಯದ ನಂತರ ಆತ ಪತ್ನಿಯ ಜೊತೆ ಮನೆಗೆ ವಾಪಸ್ಸಾಗಿದ್ದಾನೆ. ಹೀಗಾಗಿ ನಾನು ಈ ಮದುವೆಯನ್ನು ಒಪ್ಪಿಕೊಳ್ಳಲು ಸಿದ್ಧಳಿಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.
ಹರಿದ್ವಾರ್ ನ ಆರ್ಯ ಸಮಾಜ ಮಂದಿರದಲ್ಲಿ ಎರಡು ತಿಂಗಳ ಹಿಂದೆ ಈ ಮದುವೆ ನಡೆದಿದೆ. ಆದರೆ ಲಾಕ್ಡೌನ್ ಮುಗಿದ ನಂತರ ನವದಂಪತಿ ಮ್ಯಾರೇಜ್ ಸರ್ಟಿಫಿಕೆಟ್ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಬಳಿಕ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದಳು. ಗುಡ್ಡು ಲಾಕ್ಡೌನ್ ಇದ್ದರೂ ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ನಿರ್ಧರಿಸಿದ್ದ.
ಆ ಸಮಯದಲ್ಲಿ ಸಾಕ್ಷಿಗಳ ಕೊರತೆಯಿಂದಾಗಿ ನಾವು ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಮತ್ತೆ ಹರಿದ್ವಾರ್ ಗೆ ಹೋಗಲು ನಿರ್ಧರಿಸಿದ್ದೆ. ಆದರೆ ಲಾಕ್ಡೌನ್ನಿಂದ ಸಾಧ್ಯವಾಗಲಿಲ್ಲ. ದೆಹಲಿಯಲ್ಲಿ ಬಾಡಿಗೆ ಮನೆ ಖಾಲಿ ಮಾಡುವಂತೆ ಪತ್ನಿಗೆ ತಿಳಿಸಿದ್ದೆ. ಹೀಗಾಗಿ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾರೆ.
Mother sends son to buy groceries, he returns with wife
Read @ANI Story | https://t.co/no1NZNCGLQ pic.twitter.com/xW9kT9e64H
— ANI Digital (@ani_digital) April 29, 2020
ಸದ್ಯಕ್ಕೆ ಸಾಹಿಬಾಬಾದ್ ಪೊಲೀಸರು ಸವಿತಾ ವಾಸಿಸುತ್ತಿದ್ದ ದೆಹಲಿಯ ಬಾಡಿಗೆ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದು, ದಂಪತಿ ವಾಸಮಾಡಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ದಾರೆ.