ಬೆಳಗಿನ ಜಾವ ಅಬ್ಬರಿಸಿದ ಮಳೆ : ಮನೆಗೆ ನುಗ್ಗಿದ ನೀರು
ಬೆಳಗಿನ ಜಾವ ಅಬ್ಬರಿಸಿದ ಮಳೆಗೆ ಬಾಗಲಕೋಟೆ ಸೋಮಲಾಪೂರ ಗ್ರಾಮದಲ್ಲಿ ಐದಾರು ಮನೆಗೆ ನೀರು ನುಗ್ಗಿದ ಪರಿಣಾಮ ಮನೆಗಳು, ಹೊಲದಲ್ಲಿನ ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿವೆ.
ಗ್ರಾಮದಲ್ಲಿ ಬೆಳಿಗ್ಗೆ ೫ ಗಂಟೆಯಿಂದ ಸತತವಾಗಿ ಮಳೆ ಸುರಿದಿದೆ. ಹಳ್ಳದಂತೆ ಹರಿದ ಮಳೆ ನೀರಿಗೆ ಸಿಲುಕಿದ ಸಾಮಾಗ್ರಿ ಹೊರ ತರಲು ಜನ ಹರಸಾಹಸ ಪಡಬೇಕಾಗಿದೆ.
ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.