ಮಧ್ಯಂತರ ಚುನಾವಣೆಗೆ ತಯಾರಾಗಿ ಎಂದಿದ್ದ ಸಿದ್ದರಾಮಯ್ಯ ಗೆ ಪ್ರೀತಂಗೌಡ ತಿರುಗೇಟು….
ಮಧ್ಯಂತರ ಚುನಾವಣೆಗೆ ತಯಾರಾಗಿ ಎಂದಿದ್ದ ಸಿದ್ದರಾಮಯ್ಯ ಗೆ ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.
ಚುನಾವಣೆ ಬರುತ್ತೆ ತಿಂಗಳು ಲೆಕ್ಕದಲ್ಲಾದ್ರೆ 48 ರಿಂದ 50 ತಿಂಗಳಲ್ಲಿ. ವರ್ಷದ ಲೆಕ್ಕದಲ್ಲಿ ನಾಲ್ಕು ವರ್ಷ ಕಳೆದ ಬಳಿಕ ಚುನಾವಣೆ ಬರುತ್ತೆ. ಸಿದ್ದರಾಮಯ್ಯ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಹಾಗೆ ಹೇಳಿರಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ನಾವೇನು ಐವತ್ತು ವರ್ಷ ಅದಿಕಾರಕ್ಕೆ ಅಂಟಿಕೊಂಡು ಕೂತಿರಲ್ಲ. 2023 ಕ್ಕೆ ಚುನಾವಣೆ ಬರುತ್ತೆ ಬಿಜೆಪಿ ಒಳ್ಳೆಕೆಲಸ ಮಾಡಿದ್ರೆ ಮತ್ತೊಮ್ಮೆ ಅದಿಕಾರಕ್ಕೆ ಬರ್ತಿವಿ ಎಂದು ವಿಶ್ವಾಸವಿದೆ. ನಾನೂ ಭವಿಷ್ಯ ಹೇಳ್ತೀನಿ ಮುಂದಿನ 15 ವರ್ಷ ಬಿಜೆಪಿ ಸರ್ಕಾರ ಇರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶೀಘ್ರ ಸರ್ಕಾರ ಪತನ ಎಂದಿದ್ದ ಕೋಡಿ ಶ್ರೀಗೆ ಬಿಜೆಪಿ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟಿದ್ದಾರೆ.ನಾನು ಭವಿಷ್ಯ ನುಡಿದಿದ್ದು ನಿಜವಾಗಿದೆ. ನಾನು ಗೆಲ್ತೀನಿ ಅಂದಿದ್ದೆ,ನಮ್ಮ ಸರ್ಕಾರ ಬರುತ್ತೆ ಎಂದಿದ್ದೆ ಎಲ್ಲಾ ನಿಜವಾಗಿದೆ. ಮುಂದೆಯೂ ನಮ್ಮ ಸರ್ಕಾರ ಬರುತ್ತೆ ಅಂತಿದೀನಿ ನನ್ನನ್ನೂ ಸ್ವಾಮೀಜಿಯಾಗಿ ಸ್ವೀಕರಿಸಿ ಹೇಳಿ. ಈಗ ಸರ್ಕಾರ ಪತನದ ಭವಿಷ್ಯ ಹೇಳಿರೋ ಸ್ವಾಮೀಜಿ ಹಿಂದಿನ ವಿಚಾರಗಳನ್ನ ನೋಡಿ.
ಅವರು ಗಾಳಿ ಬಂದಕಡೆ ತೂರಿಕೊಳ್ಳೊದು ಅವರ ಗುಣ. ಅವರಿಗೆ ದೇವರು ಒಳ್ಳೆ ಬುದ್ದಿ ಕೊಡಲಿ ಎಂದು ಕಿಡಿ. ರಾಜ್ಯದ ವಿಚಾರದಲ್ಲಿ ಮೀಡಿಯಾ ಅಟ್ರಾಕ್ಷನ್ ಗೆ ಬಾಯಿಗೆ ಬಂದಹಾಗೆ ಮಾತಾಡೊದು ಬೇಡಾ.ಅವರು ಹಿರಿಯರು ಪಾದಕ್ಕೆ ನಮಸ್ಕಾರ ಮಾಡಿ ಹೇಳ್ತೀನಿ.
ನೀವು ರಾಜಕಾರಣದ ಬಗ್ಗೆ ಸ್ವಲ್ಪ ದಿನ ಭವಿಷ್ಯ ಹೇಳೋದನ್ನ ಕಡಿಮೆ ಮಾಡಿದ್ರೆ ಸಾರ್ವಜನಿಕ ಹಿತದಿಂದ ಒಳ್ಳೆಯದು ಎಂದು ಅಸಮಾಧಾನ ಹೊರ ಹಾಕಿದ ಶಾಸಕ ಪ್ರೀತಂಗೌಡ.