ರಸ್ತೆ ಪಕ್ಕದಲ್ಲಿ ಉರುಳಿದ ಸಾರಿಗೆ ಬಸ್ , ತಪ್ಪಿದ ಭಾರಿ ಅನಾಹುತ
ಧಾರವಾಡ ದಿಂದ ಕ್ಯಾರಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ರಸ್ತೆ ಪಕ್ಕದಲ್ಲಿ ಉರುಳಿದ ಘಟನೆ ಧಾರವಾಡದ ಕ್ಯಾರಕೊಪ್ಪ ರಸ್ತೆ ಬಳಿ ನಡೆದಿದೆ. ೨೫ ರಿಂದ ೩೦ ಪ್ರಯಾಣಿಕರಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಉರುಳಿದೆ. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.
ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಣೆ ನಡೆಸಿದ್ದಾರೆ.