ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಸ್ ಆರ್ ಪಾಟೀಲ್ ಹೇಳಿಕೆ..
ಸಿದ್ದರಾಮಯ್ಯ ವಿರುದ್ಧ ಮುನಿಯಪ್ಪ, ಸೇರಿ ಹಿರಿಯ ಮುಖಂಡರು ವಾಗ್ದಾಳಿ ವಿಚಾರ…
ಮುನಿಯಪ್ಪನವರು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದಾರೆ..
ಈಗಾಗಲೇ ಮುನಿಯಪ್ಪ ನಾನು ಸ್ನೇಹಿತರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ..
ಅಂತಹುದೇನು ಆಗಿಲ್ಲವೆಂದು ಸಿದ್ದರಾಮಯ್ಯನವ್ರೇ ಹೇಳಿದ್ದಾರೆ…
ನಾನು ಆ ಸಭೆಯಲ್ಲಿ ಇರಲಿಲ್ಲ..
ಸಿದ್ದರಾಮಯ್ಯನವ್ರು ಅದಕ್ಕೆ ತೆರೆಯೆಳೆದಿದ್ದಾರೆ..
ಪಕ್ಷದ ಆಂತರಿಕ ವೇದಿಕೆಯಲ್ಲಿ ಮುನಿಯಪ್ಪ ಅವ್ರು ತಮ್ಮ ವಿಚಾರ ಹೇಳಿದ್ದಾರೆ.ಅದಕ್ಕೆ ಸಿದ್ದರಾಮಯ್ಯರು ಸಮಜಾಯಿಷಿ ನೀಡಿದ್ದಾರೆ..
ಇದು ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವ..
ಈ ರೀತಿಯಾಗಿ ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆ ನಡೆದಿದ್ದು, ಪ್ರಜಾಪ್ರಭುತ್ವದ ಲಕ್ಷ್ಮಣ…
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ…
ಕೇಂದ್ರದ ಕ್ಯಾಬಿನೆಟ್ ಸಚಿವರೇ ಮೋದಿಯವರನ್ನು ಭೇಟಿಯಾಗೋಲ್ಲ,ಚರ್ಚೆ ಮಾಡೋಲ್ಲ…
ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದಿದೆ..
ಮೋದಿ ಕವಡೆ ಕಾಸು ಕೊಟ್ಟಿಲ್ಲ..
ಮುಖ್ಯಮಂತ್ರಿಯಾದಿಯಾಗಿ,ರಾಜ್ಯದ ಜನ ಆಶೀರ್ವಾದಿಸಿದ ೨೫ಸಂಸದರೂ ಮೋದಿಗೆ ಪರಿಹಾರ ಕೊಡ್ರಿ ಎಂದು ಕೇಳಿಲಿಕ್ಕೆ ಆಗಿಲ್ಲ..
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ..
ಮೋದಿಯವ್ರು ಹಿಟ್ಲರ್ ಶಾಯಿ ಆಡಳಿತ ನಡೆಸ್ತಿದ್ದಾರೆ ಅಂತ ಅನ್ನಿಸ್ತಿದೆ…
ಮೋದಿಯವರ ಬಳಿ ಹೋಗಿ ಮುಂಗೈ ಹಿಡಿದು,ನಮ್ಮ ರಾಜ್ಯದ ಜನ ಶೋಚನೀಯ ಸ್ಥಿತಿಯಲ್ಲಿದ್ದಾರೆ ಅಂತ ಕೇಳೋದಿಲ್ಲಂದ್ರೆ ಆಂತರಿಕ ಪ್ರಜಾಪ್ರಭುತ್ವ ಇಲ್ಲವೆಂದು ಅರ್ಥ..
ನಮ್ಮ ರಾಜ್ಯಮಟ್ಟದ ಪಕ್ಷದ ವೇದಿಕೆಯಲ್ಲಿ ಮುನಿಯಪ್ಪ-ಸಿದ್ದರಾಮಯ್ಯ ಚರ್ಚೆ ಮಾಡಿದ್ದಾರೆ..
ಚರ್ಚೆ ಮಾಡಬಾರದಂತೇನಿಲ್ಲ..
ಚರ್ಚೆ ಮಾಡಿರೋದನ್ನು ಭಿನ್ನಾಭಿಪ್ರಾಯವೆಂದು ಬಿಂಬಿಸಬಾರದು..
ಮಾಧ್ಯಮಗಳಲ್ಲಿ ಹೆಚ್ಚಾಗಿ ಭಿನ್ನಾಭಿಪ್ರಾಯವೆಂದು ಬಿಂಬಿತವಾಗಿದೆ…
ಪಕ್ಷದೊಳಗೆ ಚರ್ಚೆ ಮಾಡಿದ್ದಾರೆ,ಅದಕ್ಕೆ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ..
ಇದು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಲಕ್ಷಣ…
ಜಮಖಂಡಿ ಜಿಲ್ಲೆಯಾಗಬೇಕೆಂದು ಬಹುದಿನದ ಬೇಡಿಕೆಯಿದೆ..
ಅದಕ್ಕೆ ಅವರು ಕೇಳಿದ್ದಾರೆ..
ಎಸ್ ಆರ್ ಪಾಟೀಲ್ ಜಮಖಂಡಿ ಜಿಲ್ಲೆಗೆ ಬೆಂಬಲವಿದ್ಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ..
ನಾವು ವಿಚಾರ ಮಾಡಬೇಕಿದೆ..
ಅವ್ರಿಗೆ ಕೇಳುವ ಹಕ್ಕಿದೆ ಕೇಳಿದ್ದಾರೆ..
ಜಿಲ್ಲಾಮಟ್ಟದ ನಾಯಕರು ಚರ್ಚೆ ಮಾಡಬೇಕಿದೆ..
ಜಮಖಂಡಿ ನಾಯಕರು, ಸ್ವಾಮೀಜಿಗಳು ಪಕ್ಷಾತೀತವಾಗಿ ಜಿಲ್ಲೆ ಮಾಡಬೇಕೆಂದು ಕೇಳಿದ್ದಾರೆ..
ಸೂಕ್ತವಾಗಿದ್ದರೆ ಜಮಖಂಡಿ ಜಿಲ್ಲೆ ಮಾಡೋದಕ್ಕೆ ಅಡ್ಡಿಯಿಲ್ಲ…
ನಮ್ಮ ರಾಜ್ಯಮಟ್ಟದ ನಾಯಕರು ಚರ್ಚೆ ಮಾಡಬೇಕಿದೆ ಎಂದ ಎಸ್ ಆರ್ ಪಾಟೀಲ್…
ಜಮಖಂಡಿ ಜಿಲ್ಲಾ ಬೇಡಿಕೆ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ವಿಟ್ಟಂತೆ ಎಸ್ ಆರ್ ಪಾಟೀಲ್ ಹೇಳಿಕೆ..
ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಸ್ ಆರ್ ಪಾಟೀಲ್ ಹೇಳಿಕೆ..