‘ದೇವೇಗೌಡರಿಗೆ ಚಾಕು ಹಾಕಿ ಹೋಗಿದ್ದವರನ್ನೇಲ್ಲಾ ಜನ ಡಸ್ಟ್ ಬಿನ್ ಗೆ ಹಾಕಿದ್ದಾರೆ’ ರೇವಣ್ಣ
ಕೆಲವರು ದೇವೇಗೌಡರಿಗೆ ಚಾಕು ಹಾಕಿ ಹೋಗಿದ್ರು ಅವರನ್ನೇಲ್ಲಾ ಈಗ ಜನ ಡಸ್ಟ್ ಬಿನ್ ಗೆ ಹಾಕಿದ್ದಾರೆ ಎಂದು ಜೆಡಿಎಸ್ ಬಿಟ್ಟು ಹೋದ ಶಾಸಕರ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ.
ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲಾ. ದೇವೇಗೌಡರು ಇದನ್ನೆಲ್ಲಾ ಸಾಕಷ್ಟು ನೋಡಿದ್ದಾರೆ. ಎಲಿವೆಟೆಡ್ ಕಾರಿಡಾರ್ ನ್ನ ನನ್ನ ಅಧಿಕಾರದ ಅವಧಿಯಲ್ಲಿ ಜಾರಿ ಮಾಡಿದೆ. 1 ದಿಂದ 24 ಕಿಮೀ, ಕಾಮಗಾರಿ ಇದು ಎಲಿವೆಟೆಡ್ ಕಾಮಗಾರಿ, ಎಲಿವೆಟೆಡ್ ಕಾಮಗಾರಿ ಸಂಭಂದ ಹೈಕೋರ್ಟ್ ನಲ್ಲಿ ಸ್ಟೇ ಇದೆ. ಆದ್ರೆ ಈಗ ಈ ಎಲಿವೆಟೆಡ್ ಕಾಮಗಾರಿಯನ್ನ ತಡೆ ಹಿಡಿದಿದ್ದಾರೆ. ನಾನು ಮಾಡಿದ್ದು 5500 ಕೋಟಿ , ಆಧರೆ ಈಗ 30 ಸಾವಿರ ಕೋಟಿ ಎಂದರು. ಲೋಕಸಭಾ ಚುನಾವಣೆಯಲ್ಲಿ ಪಡುವಲಹಿಪ್ಪೆ ಮತಗಟ್ಟೆಯಲ್ಲಿ 26 ನಿಮಿಷ ಒಳಗಡೆ ಇದ್ದ ಕಾರಣ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.