ನೋಡ್ರಿ… ನೋಡ್ರಿ… ಇಲ್ಲಿ ಎಂಟಿಬಿ ನಾಗರಾಜ್ ಬೆಂಬಲಿಗರು ಮತಕ್ಕಿಷ್ಟು ಹಣ ಹಂಚುತಾವ್ರೆ…
ನೋಡ್ರಿ… ನೋಡ್ರಿ… ಇಲ್ಲಿ ಚುನಾವಣಾ ಅಧಿಕಾರಿಗಳೇ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಬೆಂಬಲಿಗರು ಮತಕ್ಕಿಷ್ಟು ಹಣ ಕೊಡ್ತ್ವರೇ.
ಎಲೆಕ್ಷನ್ ಬಂತು ಅಂದ್ರೆ ಅಭಿವೃದ್ಧಿ ಕಾರ್ಯಗಳನ್ನ ನೆನೆಯೋದಕ್ಕಿಂತ ದುಡ್ಡು ಹಂಚವರೇ ಹೆಚ್ಚು. ಇದಕ್ಕೆ ಬಿಟಿಎಂ ನಾಗರಾಜ್ ಅವರ ಬೆಂಬಲಿಗರೂ ಹೊರತಾಗಿಲ್ಲ . ಅದೇನ್ ದೈರ್ಯ ಅಂತೀರಾ.. ನಡು ರಸ್ತೆಯಲ್ಲೇ ರಾಜೋರೋಷವಾಗಿ ಹಣಕೊಟ್ಟು ಓಟು ಕೋಳ್ತಾಯಿದಾರೆ.
ಹೌದು.. ಹೊಸಕೋಟೆಯಲ್ಲಿ ಉಪಚುನಾವಣೆ ರಂಗೇರಿದೆ. ಎಂಟಿಬಿ ನಾಗರಾಜ್ ಬೆಂಬಲಿಗರಿಂದ ರಸ್ತೆಯಲ್ಲೆ ಹಣ ಹಂಚಿಕೆ ಮಾಡ್ತಾಯಿರುವ ದೃಶ್ಯ ಸದ್ಯ ವೈರಲ್ ಆಗಿದೆ. ಚುನಾವಣಾ ಪ್ರಚಾರಕ್ಕೆ ತೆರಳಿದ ವೇಳೆ ಎಂಟಿಬಿ ನಾಗರಾಜ್ ಎದುರೇ ಜನರಿಗೆ ಗರಿ ಗರಿ ನೋಟು ಹಂಚಿಕೆ ಮಾಡಲಾಗಿದೆ. ಹಣ ಹಂಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ಈ ವಿಡಿಯೋಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲ್ವಾ ಚುನಾವಣಾ ಅಧಿಕಾರಿಗಳು ಎಂದು ಶರತ್ ಬಚ್ಚೇಗೌಡ ಬೆಂಬಲಿಗರು ಪ್ರಶ್ನೆ ಮಾಡ್ತಿದ್ದಾರೆ. ಎಂಟಿಬಿ ನಾಗರಾಜ್ ಹೊಸಕೋಟೆ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ಚುನಾವಣಾ ನೀತಿಸಂಹಿತೆ ಗಾಳಿಗೆ ತೂರಿ ಮಹಿಳೆಯ ಮಂಗಳಾರತಿ ತಟ್ಟೆಗೆ ೨ ಸಾವಿರ ನೋಟ್ ಹಾಕಿದ್ದಾರೆ. ಇದನ್ನ ಪ್ರಶ್ನಿಸಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.