ಯಾರೋ ಹೇಳಿದ್ರು ಎಂದು ರಾಜಕೀಯ ಮಾಡಿದ್ರೆ ಇಲ್ಲಿ ನಡೆಯಲ್ಲಾ – ಅಧಿಕಾರಿಗಳಿಗೆ ಸಚಿವರ ಖಡಕ್ ವಾರ್ನಿಂಗ್
ಯಾರೋ ಹೇಳಿದ್ರು ಎಂದು ರಾಜಕೀಯ ಮಾಡಿದ್ರೆ ಇಲ್ಲಿ ನಡೆಯಲ್ಲಾ ಎಂದು ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹಾಸನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಸಚಿವರು.
ಮಾಜಿ ಸಚಿವ ಹೆಚ್,ಡಿ,ರೇವಣ್ಣರ ಹೆಸರು ಹೇಳದೇ ಪರೋಕ್ಷವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಾನು 1989 ರಿಂದಲೂ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಇಲಾಖೆಯವರು ಸಂಪೂರ್ಣ ಮಾಹಿತಿ ತರಬೇಕು. ಯಾವುದೋ ಸಮಯಕ್ಕೆ ಬರೋದು ಹೋಗೋದು ಅಂದರೆ ಆಗಲ್ಲಾ.
ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕು. ನಾವು ಸಾರ್ವಜನಿಕರ ಹಣದಿಂದ ಕೆಲಸ ಮಾಡುತಿದ್ದೇವೆ. ಎರಡು ಮೂರು ತಿಂಗಳಲ್ಲಿ ಎರಡು ಮೂರು ಬಾರಿ ಸಭೆ ಮಾಡುತ್ತೇನೆ. ನೆರೆ ಮತ್ತು ಬರದ ಮಾಹಿತಿ ಸ್ಪಷ್ಟವಾಗಿ ಹೇಳಬೇಕು. ಕೆಡಿಪಿ ಸಭೆಯ ಪುಸ್ತಕದ ಎಲ್ಲಾ ಮಾಹಿತಿಯನ್ನು ನಾನು ಓದುತ್ತೇನೆ. ಮಾಹಿತಿ ಸರಿಯಾಗಿ ನೀಡಲಿಲ್ಲಾ ಎಂದರೆ ನಾನು ಸಹಿಸೋಲ್ಲಾ. ನಿಮ್ಮ ಬೇರೆ ವರ್ತನೆ ಇದ್ರೆ ಸರಿ ಮಾಡಿಕೊಳ್ಳಿ ಎಂದು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನೀವು ಮಾನಸಿಕವಾಗಿ ರೆಡಿಯಾಗಿರಬೇಕು ಎಲ್ಲರೂ ತಯಾರಾಗಿ ಬರಬೇಕು. ಸರ್ಕಾರಿ ಕಾರ್ಯಕ್ರಮವನ್ನ ಜನ್ರಿಗೆ ತಲುಪಿಸಬೇಕು. ನಮ್ಮ ಸರ್ಕಾರದಲ್ಲಿ ಇದೆಲ್ಲಾ ನಡೆಯಲ್ಲಾ ಸರಿಯಾಗಿ ಕೆಲಸ ಮಾಡಬೇಕು. ಸರಿಯಾಗಿ ಯಾರೂ ಕೆಲಸ ಮಾಡುತ್ತಿಲ್ಲಾ ಎಂಬುವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.