ರಾಜಸ್ಥಾನ ರಾಜಕೀಯ ಹೈಡ್ರಾಮಕ್ಕೆ ವೇದಿಕೆಯಾಗಲಿದೆಯಾ ಬೆಂಗಳೂರು!

ರಾಜಸ್ಥಾನ ರಾಜಕೀಯ ಹೈಡ್ರಾಮಾದ ಮುಂದುವರಿದ ಭಾಗಕ್ಕೆ ಬೆಂಗಳೂರು ವೇದಿಕೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್ ವಿರುದ್ಧ ದಂಡೆದ್ದು ಕೆಂಪು ಬಾವುಟ ಹಾರಿಸಿ ಹರ್‍ಯಾಣಕ್ಕೆ ಹಾರಿದ್ದು, ಅಲ್ಲಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಸಚಿನ್ ಪೈಲಟ್ ಮತ್ತವರ ಬೆಂಗಲಿಗ ಶಾಸಕರ ದಂಡು, ಈಗ ಅಲ್ಲಿಂದ ಬೆಂಗಳೂರಿಗೆ ಓಡಿ ಬರುವ ಸಂಭವಿದೆ ಎಂದು ಹೇಳಾಗಿದೆ.

ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿಯೊಂದಿಗೆ ಕೈಜೋಡಿಸಲಾಗಿದೆ ಎಂದು ಪೋನ್‌ ಕದ್ದಾಲಿಕೆ ಮಾಡಿರುವ ಕಾಂಗ್ರೆಸ್‌ ನಾಯಕರು ಬಿಜೆಪಿ ನಾಯಕರು ಹಾಗೂ ಬಂಡಾಯ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆ ಕಾರಣಕ್ಕಾಗಿ ತಮ್ಮನ್ನು ಹುಡುಕಿಕೊಂಡು ರಾಜಾಸ್ಥಾನ ಪೊಲೀಸರು ತಂಡ ಹರ್‍ಯಾಣದ ರೆಸಾರ್ಟ್‌ಗೆ ಬರುತ್ತಿರುವ ವಿಷಯ ಗೊತ್ತಾಗಿ ಪೈಲಟ್ ಗ್ಯಾಂಗ್ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಸದ್ಯ, ಹರ್ಯಾಣದಿಂದ ಎಸ್ಕೇಪ್‌ ಆಗಿರುವ ಪೈಲಟ್‌ ಗುಂಪಿಗೆ ಮುಂದಿನ ನೆಲೆ ಬಿಜೆಪಿಯೇ ಅಧಿಕಾರದಲ್ಲಿರುವ ರಾಜ್ಯವಾಗಲಿದ್ದು, ಹಾಗಾಗಿ.ಇವರೆಲ್ಲರೂ ಬಿಜೆಪಯದ್ದೇ ಸರಕಾರವಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿದೆ.

ಇದೇ ವೇಳೆ ಅಧಿಕಾರಕ್ಕಾಗಿ ಕಾಗ್ರೆಸಿನಲ್ಲಿ ಕಿತ್ತಾಟ ಮುಗಿಲೇರಿರುವುದಕ್ಕೆ ಮಾಜಿ ಸಿಎಂ ವಸುಂಧರಾ ರಾಜೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಒಳಜಗಳಕ್ಕೆ ರಾಜಸ್ಥಾನಿ ಜನರ ಹಣ ವ್ಯರ್ಥವಾಗುತ್ತಿರುವುದು ದುರದೃಷ್ಟಕರ ಎಂದು ಟ್ವೀಟ್ ಮೂಲಕ ರಾಜೇ ಕಿಡಿ ಕಾರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights